<p><strong>ಸಾಗರ:</strong> ಇಲ್ಲಿನ ಪರಿಣಿತಿ ಕಲಾ ಕೇಂದ್ರದ ವತಿಯಿಂದ ನ. 15 ಹಾಗೂ 16ರಂದು ಸಂಜೆ 5.30ಕ್ಕೆ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ 11ನೇ ರಾಷ್ಟ್ರೀಯ ನೃತ್ಯ, ಸಂಗೀತ, ಜಾನಪದೋತ್ಸವ ಆಯೋಜಿಸಲಾಗಿದೆ ಎಂದು ಕೇಂದ್ರದ ಪ್ರಮುಖರಾದ ವೀಣಾ ಬೆಳೆಯೂರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.</p>.<p>15ರಂದು ರಾಘವೇಂದ್ರ ಬಿಜಾಡಿ ಸಂಗಡಿಗರಿಂದ ಸುಗಮ ಸಂಗೀತ, ಬೆಂಗಳೂರಿನ ದುರ್ಗಾ ಪರಮೇಶ್ವರಿ ಸ್ಕೂಲ್ ಆಫ್ ಡಾನ್ಸ್ ತಂಡದಿಂದ ಭರತನಾಟ್ಯ, ರಾಜಶಕ್ತಿ ಗರ್ಬರಾಸ್ ಮಂಡಲ್ ತಂಡದಿಂದ ಜಾನಪದ ನೃತ್ಯ, ತ್ರಿಶೂರ್ನ ಪುಷ್ಪಕ್ ಸಂಗಮ್ ತಂಡದಿಂದ ತಿರುವತಿರಕ್ಕಳ್ಳಿ ನೃತ್ಯ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.</p>.<p>16ರಂದು ಬೆಂಗಳೂರಿನ ಶಾಂತಲಾ ಡಾನ್ಸ್ ಸಂಸ್ಥೆಯಿಂದ ಭರತನಾಟ್ಯ, ಗುಜರಾತ್ನ ಜಾಮ್ ನಗರ್ನ ರಾಜಶಕ್ತಿ ರಾಸ್ ಮಂಡಲ್ ಅವರಿಂದ ಜಾನಪದ ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.</p>.<p>ಪ್ರಸಕ್ತ ಸಾಲಿನ ‘ಪರಿಣಿತಿ ಪ್ರಶಸ್ತಿ’ಯನ್ನು ಸಾಧಕರಾದ ಶಾಂತಾ ದಂತಿ, ವೈ.ಎ.ದಂತಿ, ನಾಗರಾಜ್ ಪೈ, ಮೋನಾ ಪೈ ಹಾಗೂ ಪರಿಣಿತಿ ಸಾಂಸ್ಕೃತಿಕ ಪ್ರಶಸ್ತಿಯನ್ನು ಬಿ.ಟಾಕಪ್ಪ ಕಣ್ಣೂರು, ಪರಶುರಾಮ ಸೂರನಗದ್ದೆ, ಸಂಜನಾ ಆರ್.ಎಸ್. ಅವರಿಗೆ ಪ್ರಧಾನ ಮಾಡಲಾಗುವುದು ಎಂದರು.</p>.<p>ಪ್ರಮುಖರಾದ ವಿದ್ವಾನ್ ಎಂ.ಗೋಪಾಲ್, ಉದಯಕುಮಾರ್ ಕುಂಸಿ, ಸತೀಶ್ ಕೆ. ಜಯಶ್ರೀ, ಸೋಮಶೇಖರ್, ಮಾಧವ ಭಟ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಗರ:</strong> ಇಲ್ಲಿನ ಪರಿಣಿತಿ ಕಲಾ ಕೇಂದ್ರದ ವತಿಯಿಂದ ನ. 15 ಹಾಗೂ 16ರಂದು ಸಂಜೆ 5.30ಕ್ಕೆ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ 11ನೇ ರಾಷ್ಟ್ರೀಯ ನೃತ್ಯ, ಸಂಗೀತ, ಜಾನಪದೋತ್ಸವ ಆಯೋಜಿಸಲಾಗಿದೆ ಎಂದು ಕೇಂದ್ರದ ಪ್ರಮುಖರಾದ ವೀಣಾ ಬೆಳೆಯೂರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.</p>.<p>15ರಂದು ರಾಘವೇಂದ್ರ ಬಿಜಾಡಿ ಸಂಗಡಿಗರಿಂದ ಸುಗಮ ಸಂಗೀತ, ಬೆಂಗಳೂರಿನ ದುರ್ಗಾ ಪರಮೇಶ್ವರಿ ಸ್ಕೂಲ್ ಆಫ್ ಡಾನ್ಸ್ ತಂಡದಿಂದ ಭರತನಾಟ್ಯ, ರಾಜಶಕ್ತಿ ಗರ್ಬರಾಸ್ ಮಂಡಲ್ ತಂಡದಿಂದ ಜಾನಪದ ನೃತ್ಯ, ತ್ರಿಶೂರ್ನ ಪುಷ್ಪಕ್ ಸಂಗಮ್ ತಂಡದಿಂದ ತಿರುವತಿರಕ್ಕಳ್ಳಿ ನೃತ್ಯ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.</p>.<p>16ರಂದು ಬೆಂಗಳೂರಿನ ಶಾಂತಲಾ ಡಾನ್ಸ್ ಸಂಸ್ಥೆಯಿಂದ ಭರತನಾಟ್ಯ, ಗುಜರಾತ್ನ ಜಾಮ್ ನಗರ್ನ ರಾಜಶಕ್ತಿ ರಾಸ್ ಮಂಡಲ್ ಅವರಿಂದ ಜಾನಪದ ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.</p>.<p>ಪ್ರಸಕ್ತ ಸಾಲಿನ ‘ಪರಿಣಿತಿ ಪ್ರಶಸ್ತಿ’ಯನ್ನು ಸಾಧಕರಾದ ಶಾಂತಾ ದಂತಿ, ವೈ.ಎ.ದಂತಿ, ನಾಗರಾಜ್ ಪೈ, ಮೋನಾ ಪೈ ಹಾಗೂ ಪರಿಣಿತಿ ಸಾಂಸ್ಕೃತಿಕ ಪ್ರಶಸ್ತಿಯನ್ನು ಬಿ.ಟಾಕಪ್ಪ ಕಣ್ಣೂರು, ಪರಶುರಾಮ ಸೂರನಗದ್ದೆ, ಸಂಜನಾ ಆರ್.ಎಸ್. ಅವರಿಗೆ ಪ್ರಧಾನ ಮಾಡಲಾಗುವುದು ಎಂದರು.</p>.<p>ಪ್ರಮುಖರಾದ ವಿದ್ವಾನ್ ಎಂ.ಗೋಪಾಲ್, ಉದಯಕುಮಾರ್ ಕುಂಸಿ, ಸತೀಶ್ ಕೆ. ಜಯಶ್ರೀ, ಸೋಮಶೇಖರ್, ಮಾಧವ ಭಟ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>