<p><strong>ಸಾಗರ:</strong> ನಗರವ್ಯಾಪ್ತಿಯಲ್ಲಿ ₹ 11 ಕೋಟಿ ವೆಚ್ಚದಲ್ಲಿ ನೂತನ ರಂಗಮಂದಿರ ನಿರ್ಮಾಣಗೊಳ್ಳಲಿದ್ದು, ಮೊದಲ ಹಂತದಲ್ಲಿ ₹ 4.80 ಕೋಟಿ ಬಿಡುಗಡೆಯಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.</p>.<p>ಇಲ್ಲಿನ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ಅಭಿನಯ ಸಾಗರ ಸಂಸ್ಥೆ ಮೂರು ದಿನಗಳು ಆಯೋಜಿಸಿರುವ ನಾಟಕೋತ್ಸವವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.</p>.<p>ನಾಡಿನ ಹಿರಿಯ ರಂಗಕರ್ಮಿಗಳ ಸಲಹೆ ಪಡೆದು ಸುಸಜ್ಜಿತವಾಗಿ ರಂಗಮಂದಿರ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.</p>.<p>ಕಲೆ, ಸಾಹಿತ್ಯ, ಸಂಸ್ಕೃತಿ ಕ್ಷೇತ್ರದಲ್ಲಿ ಸಾಗರ ತಾಲ್ಲೂಕು ನಾಡಿನಲ್ಲಿ ಹೆಸರುವಾಸಿಯಾಗಿದೆ. ಈ ಭಾಗದಲ್ಲಿ ನಾಟಕ, ಸಂಗೀತ, ಸಾಹಿತ್ಯದ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ಈ ಎಲ್ಲಾ ಚಟುವಟಿಕೆಗಳಿಗೆ ನೂತನ ರಂಗಮಂದಿರ ಉತ್ತಮ ವೇದಿಕೆ ಕಲ್ಪಿಸಲಿದೆ ಎಂದು ಹೇಳಿದರು.</p>.<p>ಬದಲಾದ ಸನ್ನಿವೇಶದಲ್ಲಿ ಸದಭಿರುಚಿಯ ನಾಟಕಗಳನ್ನು ನೋಡುವ, ಪ್ರೋತ್ಸಾಹಿಸುವ ಮನೋಭಾವ ಕಡಿಮೆಯಾಗುತ್ತಿದೆ. ಪ್ರೇಕ್ಷಕರ ಪ್ರೋತ್ಸಾಹವಿದ್ದಲ್ಲಿ ಮಾತ್ರ ರಂಗಭೂಮಿಯಂತಹ ಕಲೆ ಉಳಿಯಲು ಸಾಧ್ಯ. ರಂಗ ಕಲಾವಿದರಿಗೆ ನೀಡುತ್ತಿರುವ ಮಾಸಾಶನವನ್ನು ಸರ್ಕಾರ ಹೆಚ್ಚಿಸಬೇಕಿದೆ ಎಂದರು.</p>.<p>ಮಡಿವಂತಿಕೆಯನ್ನು ಹೊಂದಿರುವ ಮನಸ್ಸುಗಳಿಗೆ ಒಂದು ಒಳ್ಳೆಯ ನಾಟಕ ಹಾಗೂ ಸತ್ವಯುತ ಬರಹವುಳ್ಳ ಪುಸ್ತಕ ದಿವ್ಯ ಔಷಧಿಯಾಗಿದೆ ಎಂದು ರಂಗ ಕಲಾವಿದ ಸಂತೋಷ್ ಸದ್ಗುರು ಹೇಳಿದರು.</p>.<p>ಅಭಿನಯ ಸಾಗರ ಸಂಸ್ಥೆಯ ನಾರಾಯಣ ಮೂರ್ತಿ ಕಾನುಗೋಡು, ಕೌಶಿಕ್ ಕಾನುಗೋಡು, ಸಂದೀಪ್ ಶೆಟ್ಟಿ, ಪ್ರತಾಪ್, ನೂತನ್ ಹಂದಿಗೋಡು, ಸಂಜೀವ್ ಇದ್ದರು.</p>.<p>ಸಿದ್ದಾಪುರದ ಹಿತ್ತಲಕೈನ ಒಡ್ಡೋಲಗ ರಂಗ ಪರ್ಯಟನೆ ತಂಡದಿಂದ ಮಂಜುನಾಥ ಎಲ್. ಬಡಿಗೇರ ನಿರ್ದೇಶನದಲ್ಲಿ ‘ಶುನಶ್ಯೇಪ’ ನಾಟಕ ಪ್ರದರ್ಶನಗೊಂಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಗರ:</strong> ನಗರವ್ಯಾಪ್ತಿಯಲ್ಲಿ ₹ 11 ಕೋಟಿ ವೆಚ್ಚದಲ್ಲಿ ನೂತನ ರಂಗಮಂದಿರ ನಿರ್ಮಾಣಗೊಳ್ಳಲಿದ್ದು, ಮೊದಲ ಹಂತದಲ್ಲಿ ₹ 4.80 ಕೋಟಿ ಬಿಡುಗಡೆಯಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.</p>.<p>ಇಲ್ಲಿನ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ಅಭಿನಯ ಸಾಗರ ಸಂಸ್ಥೆ ಮೂರು ದಿನಗಳು ಆಯೋಜಿಸಿರುವ ನಾಟಕೋತ್ಸವವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.</p>.<p>ನಾಡಿನ ಹಿರಿಯ ರಂಗಕರ್ಮಿಗಳ ಸಲಹೆ ಪಡೆದು ಸುಸಜ್ಜಿತವಾಗಿ ರಂಗಮಂದಿರ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.</p>.<p>ಕಲೆ, ಸಾಹಿತ್ಯ, ಸಂಸ್ಕೃತಿ ಕ್ಷೇತ್ರದಲ್ಲಿ ಸಾಗರ ತಾಲ್ಲೂಕು ನಾಡಿನಲ್ಲಿ ಹೆಸರುವಾಸಿಯಾಗಿದೆ. ಈ ಭಾಗದಲ್ಲಿ ನಾಟಕ, ಸಂಗೀತ, ಸಾಹಿತ್ಯದ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ಈ ಎಲ್ಲಾ ಚಟುವಟಿಕೆಗಳಿಗೆ ನೂತನ ರಂಗಮಂದಿರ ಉತ್ತಮ ವೇದಿಕೆ ಕಲ್ಪಿಸಲಿದೆ ಎಂದು ಹೇಳಿದರು.</p>.<p>ಬದಲಾದ ಸನ್ನಿವೇಶದಲ್ಲಿ ಸದಭಿರುಚಿಯ ನಾಟಕಗಳನ್ನು ನೋಡುವ, ಪ್ರೋತ್ಸಾಹಿಸುವ ಮನೋಭಾವ ಕಡಿಮೆಯಾಗುತ್ತಿದೆ. ಪ್ರೇಕ್ಷಕರ ಪ್ರೋತ್ಸಾಹವಿದ್ದಲ್ಲಿ ಮಾತ್ರ ರಂಗಭೂಮಿಯಂತಹ ಕಲೆ ಉಳಿಯಲು ಸಾಧ್ಯ. ರಂಗ ಕಲಾವಿದರಿಗೆ ನೀಡುತ್ತಿರುವ ಮಾಸಾಶನವನ್ನು ಸರ್ಕಾರ ಹೆಚ್ಚಿಸಬೇಕಿದೆ ಎಂದರು.</p>.<p>ಮಡಿವಂತಿಕೆಯನ್ನು ಹೊಂದಿರುವ ಮನಸ್ಸುಗಳಿಗೆ ಒಂದು ಒಳ್ಳೆಯ ನಾಟಕ ಹಾಗೂ ಸತ್ವಯುತ ಬರಹವುಳ್ಳ ಪುಸ್ತಕ ದಿವ್ಯ ಔಷಧಿಯಾಗಿದೆ ಎಂದು ರಂಗ ಕಲಾವಿದ ಸಂತೋಷ್ ಸದ್ಗುರು ಹೇಳಿದರು.</p>.<p>ಅಭಿನಯ ಸಾಗರ ಸಂಸ್ಥೆಯ ನಾರಾಯಣ ಮೂರ್ತಿ ಕಾನುಗೋಡು, ಕೌಶಿಕ್ ಕಾನುಗೋಡು, ಸಂದೀಪ್ ಶೆಟ್ಟಿ, ಪ್ರತಾಪ್, ನೂತನ್ ಹಂದಿಗೋಡು, ಸಂಜೀವ್ ಇದ್ದರು.</p>.<p>ಸಿದ್ದಾಪುರದ ಹಿತ್ತಲಕೈನ ಒಡ್ಡೋಲಗ ರಂಗ ಪರ್ಯಟನೆ ತಂಡದಿಂದ ಮಂಜುನಾಥ ಎಲ್. ಬಡಿಗೇರ ನಿರ್ದೇಶನದಲ್ಲಿ ‘ಶುನಶ್ಯೇಪ’ ನಾಟಕ ಪ್ರದರ್ಶನಗೊಂಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>