<p>ಸಾಗರ: ‘ಊರನ್ನು ಸ್ವಚ್ಛವಾಗಿಡಲು ಮೊದಲ ಆದ್ಯತೆ ನೀಡಿ...’</p>.<p>ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಸಮಾಲೋಚನಾ ಸಭೆಗಳಲ್ಲಿ ಅಧಿಕಾರಿಗಳಿಗೆ ಪದೇ ಪದೇ ಹೇಳುವ ಮಾತಿದು. ಇದಕ್ಕೆ ಅಧಿಕಾರಿಗಳು ಕಿವಿಗೊಟ್ಟಂತೆ ಕಾಣುತ್ತಿಲ್ಲ. ನಗರದ ವಿವಿಧ ಬಡಾವಣೆಗಳಲ್ಲಿನ ಸಾರ್ವಜನಿಕ ಶೌಚಾಲಯಗಳು ಗಬ್ಬು ನಾರುತ್ತಿರುವುದು ಇದಕ್ಕೊಂದು ಉದಾಹರಣೆ.</p>.<p>ಇಂದಿರಾಗಾಂಧಿ ಮಹಿಳಾ ಕಾಲೇಜಿನ ಪಕ್ಕದಲ್ಲಿ ಎಪಿಎಂಸಿಯು 2020ನೇ ಸಾಲಿನಲ್ಲಿ ₹ 1.72 ಕೋಟಿ ವೆಚ್ಚದಲ್ಲಿ ಸಂತೆ ಮಾರುಕಟ್ಟೆ ನಿರ್ಮಿಸಿದೆ. ಇದು ಸಾರ್ವಜನಿಕ ಶೌಚಾಲಯವನ್ನೂ ಒಳಗೊಂಡಿದ್ದು ಇದರ ನಿರ್ವಹಣೆ ಜವಾಬ್ದಾರಿ ನಗರಸಭೆಯದ್ದಾಗಿದೆ.</p>.<p>ಪ್ರತಿ ಗುರುವಾರ ನಡೆಯುವ ಇಲ್ಲಿನ ಸಂತೆಗೆ ಸೊರಬ, ಶಿಕಾರಿಪುರ, ಶಿರಾಳಕೊಪ್ಪ, ಆನವಟ್ಟಿ ಹಾಗೂ ಸುತ್ತಮುತ್ತಲ ಪ್ರದೇಶಗಳಿಂದ ವ್ಯಾಪಾರಸ್ಥರು ಬರುತ್ತಾರೆ. ಕೆಲವರು ಸಂತೆಯ ಹಿಂದಿನ ರಾತ್ರಿಯೇ ಇಲ್ಲಿಗೆ ಬಂದು ತಂಗುತ್ತಾರೆ.</p>.<p>ಇಲ್ಲಿನ ಸಾರ್ವಜನಿಕ ಶೌಚಾಲಯ ಕಾಲಿಡಲೂ ಸಾಧ್ಯವಾಗದಷ್ಟು ಹದಗೆ ಟ್ಟಿದೆ. ಬಾಗಿಲು ಮುರಿದಿದೆ. ಅದರೊಳಗೆ ಬಳಸಿ ಬಿಸಾಕಿದ ಮದ್ಯದ ಸ್ಯಾಚೆಟ್, ಬಾಟಲ್, ಬೀಡಿ, ಸಿಗರೇಟ್ ತುಂಡುಗಳ ರಾಶಿಯನ್ನೇ ಕಾಣಬಹುದು.</p>.<p>ಹೀಗಾಗಿ ಮಹಿಳೆಯರೂ ಸೇರಿ ಸಂತೆಗೆ ಬರುವ ವ್ಯಾಪಾರಸ್ಥರಿಗೆ ಬಯಲು ಶೌಚಾಲಯವೇ ಗತಿಯಾಗಿದೆ. ಕಾನ್ಲೆ ಛತ್ರದ ಸಮೀಪವಿರುವ ಮತ್ತೊಂದು ಸಾರ್ವಜನಿಕ ಶೌಚಾಲಯ ತನ್ನ ವಿಳಾಸವನ್ನೇ ಕಳೆದುಕೊಂಡ ರೀತಿಯಲ್ಲಿದೆ. ಅಲ್ಲಿ ಶೌಚಾಲಯವಿದೆ ಎಂಬುದನ್ನು ಬ್ಯಾಟರಿ ಹಾಕಿ ಹುಡುಕಬೇಕು!</p>.<p>ಗಾಂಧಿನಗರ ಬಡಾವಣೆಯ ಅಗ್ರಹಾರ ವೃತ್ತದಲ್ಲಿರುವ ಸಾರ್ವಜನಿಕ ಶೌಚಾಲಯ ಹಲವು ವರ್ಷಗಳಿಂದ ಬಾಗಿಲು ಮುಚ್ಚಿದೆ. ಈಚೆಗೆ ಸುರಿದ ಗಾಳಿ– ಮಳೆಯಿಂದ ಈ ಕಟ್ಟಡದ ಮೇಲೆ ಮರದ ರೆಂಬೆಯೊಂದು ಬಿದ್ದಿದ್ದು, ಅದನ್ನು ತೆರವುಗೊಳಿಸುವ ಪುರುಸೊತ್ತು ನಗರಸಭೆ ಸಿಬ್ಬಂದಿಗೆ ಇಲ್ಲವಾಗಿದೆ.</p>.<p>ಬಿ.ಎಚ್. ರಸ್ತೆ ಬಸ್ ನಿಲ್ದಾಣದ ಶೌಚಾಲಯದೊಳಗೆ ಮೂಗು ಮುಚ್ಚಿಕೊಂಡೇ ಹೋಗಬೇಕು. ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯದಲ್ಲೂ ಇದೇ ಸ್ಥಿತಿ ಇದೆ. ಜೆಸಿ ರಸ್ತೆಯ ಕೆನರಾ ಬ್ಯಾಂಕ್ ಎದುರಿನ ಚೌಡಮ್ಮನ ಬೀದಿಯಲ್ಲಿರುವ ಶೌಚಾಲಯದ ನಿರ್ವಹಣೆ ಇರುವುದರಲ್ಲಿ ಪರವಾಗಿಲ್ಲ ಎನ್ನುವಂತಿದೆ.</p>.<p>ಸೊರಬ ರಸ್ತೆಯ ರೇಣುಕಾಂಬಾ ಹೂವಿನಂಗಡಿ ಪಕ್ಕದಲ್ಲಿ 2001ನೇ ಸಾಲಿನಲ್ಲಿ ₹ 4 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸಾರ್ವಜನಿಕ ಶೌಚಾಲಯ ಇನ್ನೂ ಉದ್ಘಾಟನೆಯ ಭಾಗ್ಯವನ್ನೇ ಕಂಡಿಲ್ಲ.</p>.<p>ಈ ಶೌಚಾಲಯದ ಕಟ್ಟಡದ ಮೇಲೆ ಹೈಟೆನ್ಷನ್ ವಿದ್ಯುತ್ ತಂತಿ ಹಾದು ಹೋಗಿರುವುದರಿಂದ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ನೀಡಲು ಮೆಸ್ಕಾಂ ನಿರಾಕರಿಸಿದೆ. ಈ ವಿಷಯ ಗೊತ್ತಿದ್ದೂ ಇಲ್ಲಿ ಏಕೆ ಶೌಚಾಲಯ ಕಟ್ಟಲಾಯಿತು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.</p>.<p>ಜನ್ನತ್ ನಗರ ಹಾಗೂ ಇತರ ಕೆಲವು ಬಡಾವಣೆಗಳಲ್ಲಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯಗಳು ಬಾಗಿಲು ಮುಚ್ಚಿವೆ. ಹೀಗೆ ನಿರ್ವಹಣೆ ಕಾರ್ಯ ಕೈಗೊಳ್ಳದೆ ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡಲಾಗುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ನಗರದ ನಾಗರಿಕರ ಒತ್ತಾಯವಾಗಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260510-42-474584646</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಾಗರ: ‘ಊರನ್ನು ಸ್ವಚ್ಛವಾಗಿಡಲು ಮೊದಲ ಆದ್ಯತೆ ನೀಡಿ...’</p>.<p>ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಸಮಾಲೋಚನಾ ಸಭೆಗಳಲ್ಲಿ ಅಧಿಕಾರಿಗಳಿಗೆ ಪದೇ ಪದೇ ಹೇಳುವ ಮಾತಿದು. ಇದಕ್ಕೆ ಅಧಿಕಾರಿಗಳು ಕಿವಿಗೊಟ್ಟಂತೆ ಕಾಣುತ್ತಿಲ್ಲ. ನಗರದ ವಿವಿಧ ಬಡಾವಣೆಗಳಲ್ಲಿನ ಸಾರ್ವಜನಿಕ ಶೌಚಾಲಯಗಳು ಗಬ್ಬು ನಾರುತ್ತಿರುವುದು ಇದಕ್ಕೊಂದು ಉದಾಹರಣೆ.</p>.<p>ಇಂದಿರಾಗಾಂಧಿ ಮಹಿಳಾ ಕಾಲೇಜಿನ ಪಕ್ಕದಲ್ಲಿ ಎಪಿಎಂಸಿಯು 2020ನೇ ಸಾಲಿನಲ್ಲಿ ₹ 1.72 ಕೋಟಿ ವೆಚ್ಚದಲ್ಲಿ ಸಂತೆ ಮಾರುಕಟ್ಟೆ ನಿರ್ಮಿಸಿದೆ. ಇದು ಸಾರ್ವಜನಿಕ ಶೌಚಾಲಯವನ್ನೂ ಒಳಗೊಂಡಿದ್ದು ಇದರ ನಿರ್ವಹಣೆ ಜವಾಬ್ದಾರಿ ನಗರಸಭೆಯದ್ದಾಗಿದೆ.</p>.<p>ಪ್ರತಿ ಗುರುವಾರ ನಡೆಯುವ ಇಲ್ಲಿನ ಸಂತೆಗೆ ಸೊರಬ, ಶಿಕಾರಿಪುರ, ಶಿರಾಳಕೊಪ್ಪ, ಆನವಟ್ಟಿ ಹಾಗೂ ಸುತ್ತಮುತ್ತಲ ಪ್ರದೇಶಗಳಿಂದ ವ್ಯಾಪಾರಸ್ಥರು ಬರುತ್ತಾರೆ. ಕೆಲವರು ಸಂತೆಯ ಹಿಂದಿನ ರಾತ್ರಿಯೇ ಇಲ್ಲಿಗೆ ಬಂದು ತಂಗುತ್ತಾರೆ.</p>.<p>ಇಲ್ಲಿನ ಸಾರ್ವಜನಿಕ ಶೌಚಾಲಯ ಕಾಲಿಡಲೂ ಸಾಧ್ಯವಾಗದಷ್ಟು ಹದಗೆ ಟ್ಟಿದೆ. ಬಾಗಿಲು ಮುರಿದಿದೆ. ಅದರೊಳಗೆ ಬಳಸಿ ಬಿಸಾಕಿದ ಮದ್ಯದ ಸ್ಯಾಚೆಟ್, ಬಾಟಲ್, ಬೀಡಿ, ಸಿಗರೇಟ್ ತುಂಡುಗಳ ರಾಶಿಯನ್ನೇ ಕಾಣಬಹುದು.</p>.<p>ಹೀಗಾಗಿ ಮಹಿಳೆಯರೂ ಸೇರಿ ಸಂತೆಗೆ ಬರುವ ವ್ಯಾಪಾರಸ್ಥರಿಗೆ ಬಯಲು ಶೌಚಾಲಯವೇ ಗತಿಯಾಗಿದೆ. ಕಾನ್ಲೆ ಛತ್ರದ ಸಮೀಪವಿರುವ ಮತ್ತೊಂದು ಸಾರ್ವಜನಿಕ ಶೌಚಾಲಯ ತನ್ನ ವಿಳಾಸವನ್ನೇ ಕಳೆದುಕೊಂಡ ರೀತಿಯಲ್ಲಿದೆ. ಅಲ್ಲಿ ಶೌಚಾಲಯವಿದೆ ಎಂಬುದನ್ನು ಬ್ಯಾಟರಿ ಹಾಕಿ ಹುಡುಕಬೇಕು!</p>.<p>ಗಾಂಧಿನಗರ ಬಡಾವಣೆಯ ಅಗ್ರಹಾರ ವೃತ್ತದಲ್ಲಿರುವ ಸಾರ್ವಜನಿಕ ಶೌಚಾಲಯ ಹಲವು ವರ್ಷಗಳಿಂದ ಬಾಗಿಲು ಮುಚ್ಚಿದೆ. ಈಚೆಗೆ ಸುರಿದ ಗಾಳಿ– ಮಳೆಯಿಂದ ಈ ಕಟ್ಟಡದ ಮೇಲೆ ಮರದ ರೆಂಬೆಯೊಂದು ಬಿದ್ದಿದ್ದು, ಅದನ್ನು ತೆರವುಗೊಳಿಸುವ ಪುರುಸೊತ್ತು ನಗರಸಭೆ ಸಿಬ್ಬಂದಿಗೆ ಇಲ್ಲವಾಗಿದೆ.</p>.<p>ಬಿ.ಎಚ್. ರಸ್ತೆ ಬಸ್ ನಿಲ್ದಾಣದ ಶೌಚಾಲಯದೊಳಗೆ ಮೂಗು ಮುಚ್ಚಿಕೊಂಡೇ ಹೋಗಬೇಕು. ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯದಲ್ಲೂ ಇದೇ ಸ್ಥಿತಿ ಇದೆ. ಜೆಸಿ ರಸ್ತೆಯ ಕೆನರಾ ಬ್ಯಾಂಕ್ ಎದುರಿನ ಚೌಡಮ್ಮನ ಬೀದಿಯಲ್ಲಿರುವ ಶೌಚಾಲಯದ ನಿರ್ವಹಣೆ ಇರುವುದರಲ್ಲಿ ಪರವಾಗಿಲ್ಲ ಎನ್ನುವಂತಿದೆ.</p>.<p>ಸೊರಬ ರಸ್ತೆಯ ರೇಣುಕಾಂಬಾ ಹೂವಿನಂಗಡಿ ಪಕ್ಕದಲ್ಲಿ 2001ನೇ ಸಾಲಿನಲ್ಲಿ ₹ 4 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸಾರ್ವಜನಿಕ ಶೌಚಾಲಯ ಇನ್ನೂ ಉದ್ಘಾಟನೆಯ ಭಾಗ್ಯವನ್ನೇ ಕಂಡಿಲ್ಲ.</p>.<p>ಈ ಶೌಚಾಲಯದ ಕಟ್ಟಡದ ಮೇಲೆ ಹೈಟೆನ್ಷನ್ ವಿದ್ಯುತ್ ತಂತಿ ಹಾದು ಹೋಗಿರುವುದರಿಂದ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ನೀಡಲು ಮೆಸ್ಕಾಂ ನಿರಾಕರಿಸಿದೆ. ಈ ವಿಷಯ ಗೊತ್ತಿದ್ದೂ ಇಲ್ಲಿ ಏಕೆ ಶೌಚಾಲಯ ಕಟ್ಟಲಾಯಿತು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.</p>.<p>ಜನ್ನತ್ ನಗರ ಹಾಗೂ ಇತರ ಕೆಲವು ಬಡಾವಣೆಗಳಲ್ಲಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯಗಳು ಬಾಗಿಲು ಮುಚ್ಚಿವೆ. ಹೀಗೆ ನಿರ್ವಹಣೆ ಕಾರ್ಯ ಕೈಗೊಳ್ಳದೆ ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡಲಾಗುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ನಗರದ ನಾಗರಿಕರ ಒತ್ತಾಯವಾಗಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260510-42-474584646</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>