<p>ಸಾಗರ: ‘ಭಾರತೀಯ ಸಂಸ್ಕೃತಿಯನ್ನು ಪೋಷಿಸುವ ಯಕ್ಷಗಾನದಂತಹ ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ’ ಎಂದು ನಗರಸಭೆ ಮಾಜಿ ಸದಸ್ಯ ಕೆ.ಆರ್.ಗಣೇಶ್ ಪ್ರಸಾದ್ ಹೇಳಿದರು.</p>.<p>ಇಲ್ಲಿನ ಕುಡುಪಲಿ ಸದಾನಂದ ಸಭಾಭವನದಲ್ಲಿ ಯಕ್ಷಪ್ರವೀಣ ಕಲಾವೇದಿಕೆ ಈಚೆಗೆ ಏರ್ಪಡಿಸಿದ್ದ ‘ತುಳಸಿ ಜಲಂಧರ’ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>‘ಪುರಾಣದ ಪ್ರಸಂಗಗಳನ್ನು ಕಲೆಯ ರೂಪದಲ್ಲಿ ಪ್ರಸ್ತುತ ಪಡಿಸುವ ಜೊತೆಗೆ ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಯಲ್ಲಿ ಯಕ್ಷಗಾನ ಮಹತ್ವದ ಕೊಡುಗೆ ನೀಡುತ್ತಿದೆ. ಮಕ್ಕಳಲ್ಲಿ ಈ ಕಲೆಯ ಕುರಿತು ಆಸಕ್ತಿ ಮೂಡಿಸಲು ಯಕ್ಷಪ್ರವೀಣ ಕಲಾವೇದಿಕೆ ಮುಂದಾಗಿರುವುದು ಆರೋಗ್ಯಕರ ಬೆಳವಣಿಗೆ’ ಎಂದರು.</p>.<p>ಹಿರಿಯ ಯಕ್ಷಗಾನ ಕಲಾವಿದ ಬಿ.ಎಸ್.ಗಣಪತಿ ಬೆಳೆಯೂರು ಅವರನ್ನು ಸನ್ಮಾನಿಸಲಾಯಿತು. ಯಕ್ಷಪ್ರವೀಣ ಕಲಾವೇದಿಕೆಯ ಅಧ್ಯಕ್ಷ ಪ್ರಸನ್ನಕುಮಾರ್ ಎನ್.ಎಂ., ವೀಣಾ ಪ್ರಸನ್ನ ಕುಮಾರ್, ನಾರಾಯಣ ಮೂರ್ತಿ ಭೀಮನಕೋಣೆ, ರಾಮಮೂರ್ತಿ, ಅರ್ಚನಾ ಇದ್ದರು.</p>.<p>ಯಕ್ಷಗಾನ ಪ್ರದರ್ಶನದ ಹಿಮ್ಮೇಳದಲ್ಲಿ ಪ್ರಶಾಂತ ಮಧ್ಯಸ್ಥ, ಮಹೇಶ್, ಶರತ್ ಜಾನಕೈ, ಅಶೋಕ ಕ್ಯಾಸನೂರು, ಮುಮ್ಮೇಳದಲ್ಲಿ ಅನೀಶ್, ಅಥರ್ವ, ಕ್ಷಿಪ್ರ, ರಜನಿ, ರಚಿತಾ, ಸನಿಹ, ವರ್ಷಿಣಿ, ಸಾನಿಕಾ, ಅಭಿರಾಮ, ವಂದನಾ, ಅಂತರ್ಯ, ನಾಗರಾಜ, ಮಾನ್ಯತಾ, ಸ್ಮಿತಾ, ವೈನವಿ, ದಿವ್ಯ, ಸಾನಿಧ್ಯ, ಶೃತಿ ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260423-42-177052781</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಾಗರ: ‘ಭಾರತೀಯ ಸಂಸ್ಕೃತಿಯನ್ನು ಪೋಷಿಸುವ ಯಕ್ಷಗಾನದಂತಹ ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ’ ಎಂದು ನಗರಸಭೆ ಮಾಜಿ ಸದಸ್ಯ ಕೆ.ಆರ್.ಗಣೇಶ್ ಪ್ರಸಾದ್ ಹೇಳಿದರು.</p>.<p>ಇಲ್ಲಿನ ಕುಡುಪಲಿ ಸದಾನಂದ ಸಭಾಭವನದಲ್ಲಿ ಯಕ್ಷಪ್ರವೀಣ ಕಲಾವೇದಿಕೆ ಈಚೆಗೆ ಏರ್ಪಡಿಸಿದ್ದ ‘ತುಳಸಿ ಜಲಂಧರ’ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>‘ಪುರಾಣದ ಪ್ರಸಂಗಗಳನ್ನು ಕಲೆಯ ರೂಪದಲ್ಲಿ ಪ್ರಸ್ತುತ ಪಡಿಸುವ ಜೊತೆಗೆ ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಯಲ್ಲಿ ಯಕ್ಷಗಾನ ಮಹತ್ವದ ಕೊಡುಗೆ ನೀಡುತ್ತಿದೆ. ಮಕ್ಕಳಲ್ಲಿ ಈ ಕಲೆಯ ಕುರಿತು ಆಸಕ್ತಿ ಮೂಡಿಸಲು ಯಕ್ಷಪ್ರವೀಣ ಕಲಾವೇದಿಕೆ ಮುಂದಾಗಿರುವುದು ಆರೋಗ್ಯಕರ ಬೆಳವಣಿಗೆ’ ಎಂದರು.</p>.<p>ಹಿರಿಯ ಯಕ್ಷಗಾನ ಕಲಾವಿದ ಬಿ.ಎಸ್.ಗಣಪತಿ ಬೆಳೆಯೂರು ಅವರನ್ನು ಸನ್ಮಾನಿಸಲಾಯಿತು. ಯಕ್ಷಪ್ರವೀಣ ಕಲಾವೇದಿಕೆಯ ಅಧ್ಯಕ್ಷ ಪ್ರಸನ್ನಕುಮಾರ್ ಎನ್.ಎಂ., ವೀಣಾ ಪ್ರಸನ್ನ ಕುಮಾರ್, ನಾರಾಯಣ ಮೂರ್ತಿ ಭೀಮನಕೋಣೆ, ರಾಮಮೂರ್ತಿ, ಅರ್ಚನಾ ಇದ್ದರು.</p>.<p>ಯಕ್ಷಗಾನ ಪ್ರದರ್ಶನದ ಹಿಮ್ಮೇಳದಲ್ಲಿ ಪ್ರಶಾಂತ ಮಧ್ಯಸ್ಥ, ಮಹೇಶ್, ಶರತ್ ಜಾನಕೈ, ಅಶೋಕ ಕ್ಯಾಸನೂರು, ಮುಮ್ಮೇಳದಲ್ಲಿ ಅನೀಶ್, ಅಥರ್ವ, ಕ್ಷಿಪ್ರ, ರಜನಿ, ರಚಿತಾ, ಸನಿಹ, ವರ್ಷಿಣಿ, ಸಾನಿಕಾ, ಅಭಿರಾಮ, ವಂದನಾ, ಅಂತರ್ಯ, ನಾಗರಾಜ, ಮಾನ್ಯತಾ, ಸ್ಮಿತಾ, ವೈನವಿ, ದಿವ್ಯ, ಸಾನಿಧ್ಯ, ಶೃತಿ ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260423-42-177052781</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>