ಸೊರಬ: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತಾಲ್ಲೂಕಿನ ಶಿಗ್ಗಾ ಗ್ರಾಮದ ಶರತ್, ಜಡೆ ಗ್ರಾಮದ ಸಚಿನ್, ದರ್ಶನ್ ಬಂಧಿತರು.ಕಪ್ಪಗಳಲೆ ಗ್ರಾಮದ ಬಸ್ ನಿಲ್ದಾಣದಲ್ಲಿ ಬಂಧಿಸಿರುವ ಪೊಲೀಸರು ದ್ವಿಚಕ್ರವಾಹನ, 300 ಗ್ರಾಂ ಒಣ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಪಿಎಸ್ಐ ಪ್ರಶಾಂತಕುಮಾರ್ ನೇತೃತ್ವದಲ್ಲಿ ಸಿಬ್ಬಂದಿ ರಮೇಶ್ವರ ನಾಯಕ್, ಎಂ.ಕೆ.ನಾಗರಾಜ್, ಸಲ್ಮಾನ್ ಖಾನ್, ಸುಧಾಕರ್, ಜಗದೀಶ್ ಕಾರ್ಯಾಚರಣೆ ಕೈಗೊಂಡಿದ್ದರು.