‘ಶಾಸಕರು ಕೆಲ ಸ್ಥಳೀಯರ ಪರವಾಗಿರದೆ ಸಾರ್ವಜನಿಕರ ಪರವಾಗಿ ಆಡಳಿತ ನಡೆಸಬೇಕು. ಪ್ರತಿದಿನ ದೇವಸ್ಥಾನಕ್ಕೆ ₹10,000ದಿಂದ 15,000 ಕಾಣಿಕೆ ಬರುತ್ತಿದ್ದು, ಅದು ಸಹ ಅಕ್ರಮವಾಗುತ್ತಿದೆ. ಅದರ ಬಗ್ಗೆಯೂ ತನಿಖೆ ಆಗಬೇಕು. ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ನೋಡಿದರೆ ಅಧಕಾರಿಗಳೇ ಅವರಿಗೆ ಬೆಂಬಲ ನೀಡುತ್ತಿದ್ದಾರೆ ಎನ್ನುವ ಅನುಮಾನ ಮೂಡುತ್ತಿದೆ’ ಎಂದರು.