ಸಮೀಕ್ಷಾ ವರದಿ ಸಲ್ಲಿಸಿ ವಿಶೇಷ ಪರಿಹಾರ ಪ್ಯಾಕೇಜ್ಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದೇವೆ. ಹಾನಿಯ ಗಂಭೀರತೆ ಆಧರಿಸಿ ಅವರೇ ಪರಿಹಾರ ಮೊತ್ತ ನಿರ್ಧರಿಸಲಿದ್ದಾರೆ
ಪರಸಪ್ಪ ಕುರುಬರ, ಭದ್ರಾವತಿ ತಹಶೀಲ್ದಾರ್
ಹನುಮಂತಾಪುರ ಮಲ್ಲಿಗೇನಹಳ್ಳಿಯಲ್ಲಿ ನಷ್ಟ
ಏಪ್ರಿಲ್ 26ರಂದು ಮಳೆ–ಗಾಳಿಯಿಂದ ಭದ್ರಾವತಿ ತಾಲ್ಲೂಕಿನ ಹನುಮಂತಾಪುರ ಗ್ರಾಮವೊಂದರಲ್ಲೇ 203.34 ಹೆಕ್ಟೇರ್ ವ್ಯಾಪ್ತಿಯಲ್ಲಿ ಬೆಳೆದ 274503 ಅಡಿಕೆ ಮರಗಳು ನೆಲಕ್ಕುರುಳಿವೆ. ಪಕ್ಕದ ಮಲ್ಲಿಗೇನಹಳ್ಳಿಯಲ್ಲಿ 188456 ಅಡಿಕೆ ಮರ ಹಾಗೂ 2730 ತೆಂಗಿನ ಮರ ನೆಲಕಚ್ಚಿವೆ.