‘ಶಿವಮೊಗ್ಗದಲ್ಲಿ ಮೂಲಸೌಕರ್ಯ, ಪಾರ್ಕಿಂಗ್ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಕಾಣುತ್ತಿದ್ದೇವೆ. ಶಿವಮೊಗ್ಗ ನಗರ 25-30 ವರ್ಷಗಳಲ್ಲಿ ಬೆಳೆಯಬಹುದಾದ ವೇಗಕ್ಕೆ ಅನುಗುಣವಾಗಿ ರಸ್ತೆ, ಪಾರ್ಕಿಂಗ್, ಮೂಲಸೌಕರ್ಯ ಒದಗಿಸುವ ಬಗ್ಗೆ ಯೋಜನೆ ಅನುಷ್ಠಾನಗೊಳಿಸುವ ಅಗತ್ಯವಿದೆ’ ಎಂದುಪತ್ರಕರ್ತ ಗೋಪಾಲ್ ಯಡಗೆರೆ ಹೇಳಿದರು.
‘ಕೇಂದ್ರ ಮತ್ತು ರಾಜ್ಯ ಸರ್ಕಾರ ಈಗಾಗಲೇ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಜೊತೆಯಲ್ಲಿ ಪೂರಕ
ವಾಗಿ ಅನುಷ್ಠಾನ ಮಾಡಬಹುದಾದ ಯೋಜನೆಗಳ ಸಲಹೆ ನೀಡಿದಲ್ಲಿಕ್ಷೇತ್ರದ ಅಭಿವೃದ್ಧಿ ವೇಗಗತಿಯಲ್ಲಿ ಸಾಗಲಿದೆ’ ಎಂದುಪತ್ರಕರ್ತ ಅರುಣ್ ಅಭಿಪ್ರಾಯಪಟ್ಟರು.