<p>ಶಿರಾಳಕೊಪ್ಪ (ಶಿಕಾರಿಪುರ): ‘ಯುಗಾದಿಯು ಹಿಂದೂಗಳ ಹೊಸ ವರ್ಷ ಮಾತ್ರವಲ್ಲ, ಪ್ರಕೃತಿಯಲ್ಲಿ ಮರ ಗಿಡಗಳು ಹೊಸ ಚಿಗುರು ಹೊತ್ತು ಸಂಭ್ರಮಿಸುವ ಕಾಲ. ಹಾಗಾಗಿ ಪ್ರತಿಯೊಬ್ಬರೂ ಯುಗಾದಿಯನ್ನು ಆಚರಿಸಬೇಕು’ ಎಂದು ವಿರಕ್ತಮಠದ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.</p>.<p>ಪಟ್ಟಣದ ಬಸ್ನಿಲ್ದಾಣದ ಆವರಣದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ವಿಜಯದಶಮಿ ಉತ್ಸವ ಸಮಿತಿ, ಹಿಂದೂ ಸಮಾಜದ ನೇತೃತ್ವದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>‘ಮನೆ ಮನೆಗಳಲ್ಲಿ ಯುಗಾದಿ ಆಚರಿಸಿದರೆ ಸಾಲದು. ಇದು ಇಡೀ ಪಟ್ಟಣದ ಸಂಭ್ರಮವಾಗಬೇಕು’ ಎಂದರು.</p>.<p>‘ನಮ್ಮೆಲ್ಲರ ಜೀವನದಲ್ಲಿ ಸಿಹಿ–ಕಹಿ ಏನೇ ಬರಲಿ ಅದನ್ನು ಸಮನಾಗಿ ಸ್ವೀಕರಿಸಬೇಕು ಎನ್ನುವ ಸಂಕೇತದ ಯುಗಾದಿಯು ಎಲ್ಲರಿಗೂ ಒಳ್ಳೆಯದನ್ನುಂಟು ಮಾಡಲಿ’ ಎಂದು ಮುಖಂಡ ಎನ್.ವಿ. ಈರೇಶ್ ಹೇಳಿದರು.</p>.<p>ಕಲಾವಿದರಾದ ಮಹಾಂತೇಶ ಹಡಪದ, ರಮೇಶ್ ಕುರಬಗಟ್ಟಿ, ಜ್ಯೋಗಿ, ಶ್ವೇತಾ ಸಿರಸಿ, ಬಸವರಾಜ ಅವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.</p>.<p>ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ನಾಗರಾಜಗೌಡ, ಮುಖಂಡರಾದ ತಡಗಣಿ ಮಂಜುನಾಥ್, ಶಿವಕುಮಾರ್, ಮಹೇಂದ್ರಕುಮಾರ್ ಜೈನ್, ಪ್ರಭುಲಿಂಗಪ್ಪ, ಎಂ.ನವೀನ್ಕುಮಾರ್, ಸಂಗಮೇಶ ದುರ್ಗದ್, ಎಚ್.ಎಂ.ಚಂದ್ರಶೇಖರ್, ರವಿ ಶ್ಯಾನುಭಾಗ್, ಎಂ.ಆರ್.ರಾಘವೇಂದ್ರ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260323-42-1344666941</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿರಾಳಕೊಪ್ಪ (ಶಿಕಾರಿಪುರ): ‘ಯುಗಾದಿಯು ಹಿಂದೂಗಳ ಹೊಸ ವರ್ಷ ಮಾತ್ರವಲ್ಲ, ಪ್ರಕೃತಿಯಲ್ಲಿ ಮರ ಗಿಡಗಳು ಹೊಸ ಚಿಗುರು ಹೊತ್ತು ಸಂಭ್ರಮಿಸುವ ಕಾಲ. ಹಾಗಾಗಿ ಪ್ರತಿಯೊಬ್ಬರೂ ಯುಗಾದಿಯನ್ನು ಆಚರಿಸಬೇಕು’ ಎಂದು ವಿರಕ್ತಮಠದ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.</p>.<p>ಪಟ್ಟಣದ ಬಸ್ನಿಲ್ದಾಣದ ಆವರಣದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ವಿಜಯದಶಮಿ ಉತ್ಸವ ಸಮಿತಿ, ಹಿಂದೂ ಸಮಾಜದ ನೇತೃತ್ವದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>‘ಮನೆ ಮನೆಗಳಲ್ಲಿ ಯುಗಾದಿ ಆಚರಿಸಿದರೆ ಸಾಲದು. ಇದು ಇಡೀ ಪಟ್ಟಣದ ಸಂಭ್ರಮವಾಗಬೇಕು’ ಎಂದರು.</p>.<p>‘ನಮ್ಮೆಲ್ಲರ ಜೀವನದಲ್ಲಿ ಸಿಹಿ–ಕಹಿ ಏನೇ ಬರಲಿ ಅದನ್ನು ಸಮನಾಗಿ ಸ್ವೀಕರಿಸಬೇಕು ಎನ್ನುವ ಸಂಕೇತದ ಯುಗಾದಿಯು ಎಲ್ಲರಿಗೂ ಒಳ್ಳೆಯದನ್ನುಂಟು ಮಾಡಲಿ’ ಎಂದು ಮುಖಂಡ ಎನ್.ವಿ. ಈರೇಶ್ ಹೇಳಿದರು.</p>.<p>ಕಲಾವಿದರಾದ ಮಹಾಂತೇಶ ಹಡಪದ, ರಮೇಶ್ ಕುರಬಗಟ್ಟಿ, ಜ್ಯೋಗಿ, ಶ್ವೇತಾ ಸಿರಸಿ, ಬಸವರಾಜ ಅವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.</p>.<p>ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ನಾಗರಾಜಗೌಡ, ಮುಖಂಡರಾದ ತಡಗಣಿ ಮಂಜುನಾಥ್, ಶಿವಕುಮಾರ್, ಮಹೇಂದ್ರಕುಮಾರ್ ಜೈನ್, ಪ್ರಭುಲಿಂಗಪ್ಪ, ಎಂ.ನವೀನ್ಕುಮಾರ್, ಸಂಗಮೇಶ ದುರ್ಗದ್, ಎಚ್.ಎಂ.ಚಂದ್ರಶೇಖರ್, ರವಿ ಶ್ಯಾನುಭಾಗ್, ಎಂ.ಆರ್.ರಾಘವೇಂದ್ರ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260323-42-1344666941</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>