<p>ಸಾಗರ: ‘ಭಕ್ತಿ ಮಾರ್ಗದಿಂದ ಮಾತ್ರ ದೇವರ ಸಾನ್ನಿಧ್ಯದತ್ತ ಸಾಗಲು ಸಾಧ್ಯ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಅಭಿಪ್ರಾಯ ಪಟ್ಟರು.</p>.<p>ತಾಲ್ಲೂಕಿನ ತುಂಬೆ ಬೆಂಕಟವಳ್ಳಿಯಲ್ಲಿ ಈಚೆಗೆ ನಡೆದ ಶ್ರೀರಾಮೇಶ್ವರ ದೇವಸ್ಥಾನದ ನೂತನ ಶಿಲಾಮಯ ಗರ್ಭಗುಡಿ, ದೇವರ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.</p>.<p>‘ಕೇವಲ ಹಣ ಅಥವಾ ತೋರಿಕೆಯ ಆಚರಣೆಗಳಿಂದ ದೇವರನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ. ಶ್ರದ್ಧೆಯಿಂದ ಕೂಡಿದ ಭಕ್ತಿಯನ್ನು ತೋರಿಸುವುದು ಭಗವಂತನಿಗೆ ಹತ್ತಿರವಾಗುವ ಮಾರ್ಗವಾಗಿದೆ’ ಎಂದರು.</p>.<p>‘ಸಣ್ಣ ಸಣ್ಣ ಗ್ರಾಮಗಳ ಜನರಲ್ಲಿರುವ ಒಗ್ಗಟ್ಟು ಕಠಿಣ ಕೆಲಸಗಳನ್ನು ಸುಲಭ ವಾಗಿಸುತ್ತದೆ ಎಂಬುದಕ್ಕೆ ಇಲ್ಲಿ ನಡೆದಿರುವ ಕಾರ್ಯವೇ ಸಾಕ್ಷಿ. ಗ್ರಾಮದಲ್ಲಿ ವಾಸ್ತು ಪ್ರಕಾರ ಸುಂದರವಾದ ದೇವಸ್ಥಾನ ನಿರ್ಮಾಣವಾಗಿರುವುದು ಇಲ್ಲಿನ ಗ್ರಾಮಸ್ಥರ ಶ್ರದ್ಧಾ ಭಕ್ತಿಯ, ಕಾರ್ಯಕ್ಷಮತೆಯ ಸಂಕೇತವಾಗಿದೆ’ ಎಂದು ಹೇಳಿದರು.</p>.<p>ಪ್ರಧಾನ ತಂತ್ರಿಗಳಾದ ವೇದಮೂರ್ತಿ ಸಮರ್ಥ ಭಟ್ ಮಂಕಳಲೆ, ಸಿಗಂದೂರು ದೇವಾಲಯದ ಅರ್ಚಕ ಶೇಷಗಿರಿ ಭಟ್, ವರದಪುರದ ಶ್ರೀಧರ ಸೇವಾ ಮಹಾಮಂಡಲದ ಅಧ್ಯಕ್ಷ ಎಂ.ಜಿ.ಕೃಷ್ಣಮೂರ್ತಿ, ವಿ.ಶ್ರೀಧರ ಭಟ್, ಅರುಣ್ ಬೆಂಕಟವಳ್ಳಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260421-42-1077076196</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಾಗರ: ‘ಭಕ್ತಿ ಮಾರ್ಗದಿಂದ ಮಾತ್ರ ದೇವರ ಸಾನ್ನಿಧ್ಯದತ್ತ ಸಾಗಲು ಸಾಧ್ಯ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಅಭಿಪ್ರಾಯ ಪಟ್ಟರು.</p>.<p>ತಾಲ್ಲೂಕಿನ ತುಂಬೆ ಬೆಂಕಟವಳ್ಳಿಯಲ್ಲಿ ಈಚೆಗೆ ನಡೆದ ಶ್ರೀರಾಮೇಶ್ವರ ದೇವಸ್ಥಾನದ ನೂತನ ಶಿಲಾಮಯ ಗರ್ಭಗುಡಿ, ದೇವರ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.</p>.<p>‘ಕೇವಲ ಹಣ ಅಥವಾ ತೋರಿಕೆಯ ಆಚರಣೆಗಳಿಂದ ದೇವರನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ. ಶ್ರದ್ಧೆಯಿಂದ ಕೂಡಿದ ಭಕ್ತಿಯನ್ನು ತೋರಿಸುವುದು ಭಗವಂತನಿಗೆ ಹತ್ತಿರವಾಗುವ ಮಾರ್ಗವಾಗಿದೆ’ ಎಂದರು.</p>.<p>‘ಸಣ್ಣ ಸಣ್ಣ ಗ್ರಾಮಗಳ ಜನರಲ್ಲಿರುವ ಒಗ್ಗಟ್ಟು ಕಠಿಣ ಕೆಲಸಗಳನ್ನು ಸುಲಭ ವಾಗಿಸುತ್ತದೆ ಎಂಬುದಕ್ಕೆ ಇಲ್ಲಿ ನಡೆದಿರುವ ಕಾರ್ಯವೇ ಸಾಕ್ಷಿ. ಗ್ರಾಮದಲ್ಲಿ ವಾಸ್ತು ಪ್ರಕಾರ ಸುಂದರವಾದ ದೇವಸ್ಥಾನ ನಿರ್ಮಾಣವಾಗಿರುವುದು ಇಲ್ಲಿನ ಗ್ರಾಮಸ್ಥರ ಶ್ರದ್ಧಾ ಭಕ್ತಿಯ, ಕಾರ್ಯಕ್ಷಮತೆಯ ಸಂಕೇತವಾಗಿದೆ’ ಎಂದು ಹೇಳಿದರು.</p>.<p>ಪ್ರಧಾನ ತಂತ್ರಿಗಳಾದ ವೇದಮೂರ್ತಿ ಸಮರ್ಥ ಭಟ್ ಮಂಕಳಲೆ, ಸಿಗಂದೂರು ದೇವಾಲಯದ ಅರ್ಚಕ ಶೇಷಗಿರಿ ಭಟ್, ವರದಪುರದ ಶ್ರೀಧರ ಸೇವಾ ಮಹಾಮಂಡಲದ ಅಧ್ಯಕ್ಷ ಎಂ.ಜಿ.ಕೃಷ್ಣಮೂರ್ತಿ, ವಿ.ಶ್ರೀಧರ ಭಟ್, ಅರುಣ್ ಬೆಂಕಟವಳ್ಳಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260421-42-1077076196</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>