<p><strong>ಶಿವಮೊಗ್ಗ:</strong> ಇಲ್ಲಿನ ಸೋಗಾನೆ ವಿಮಾನ ನಿಲ್ದಾಣದ ಹಿಂಭಾಗದಲ್ಲಿ ರಾಜ್ಯ ಸರ್ಕಾರ ಫುಡ್ ಪಾರ್ಕ್ ನಿರ್ಮಿಸಲೆಂದು ಮೀಸಲಿಟ್ಟಿದ್ದ 97.36 ಎಕರೆ ಜಾಗ ಈಗ ‘ಮಣ್ಣುಗಳ್ಳ’ರ ಆಡಂಬೋಲವಾಗಿದೆ. ಆರು ವರ್ಷಗಳ ಅವಧಿಯಲ್ಲಿ ಅಲ್ಲಿನ 10 ಲಕ್ಷ ಮೆಟ್ರಿಕ್ ಟನ್ ಮಣ್ಣು ಕದಿಯಲಾಗಿದೆ.</p>.<p>ಕಳವು ಮಾಡಿದ ಮಣ್ಣನ್ನು ಲೇಔಟ್ಗಳ ನಿರ್ಮಾಣ, ರಸ್ತೆ ಕಾಮಗಾರಿ ಹಾಗೂ ಅಡಿಕೆ ತೋಟಗಳಿಗೆ ಬಳಸಲಾಗಿದೆ. ಫುಡ್ಪಾರ್ಕ್ನ ಬಹಳಷ್ಟು ಜಾಗದಲ್ಲಿ 10ರಿಂದ 20 ಅಡಿಯ ಆಳದವರೆಗೆ ಮಣ್ಣು ಬಗೆದು ಸಾಗಿಸಲಾಗಿದ್ದು, ಸಮತಟ್ಟಾಗಿದ್ದ ಜಾಗ ಹಲವು ಕಡೆ ಈಗ ಕೃಷಿ ಹೊಂಡಗಳಂತೆ ಕಾಣುತ್ತಿದೆ.</p>.<p>ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಸೋಗಾನೆಯ ಸರ್ವೆ ನಂ. 120ರಲ್ಲಿ 97.36 ಎಕರೆ ಜಾಗವನ್ನು ರಾಜ್ಯ ಸರ್ಕಾರದ ಉದ್ಯಮ ಫುಡ್ ಕರ್ನಾಟಕ ಲಿಮಿಟೆಡ್ಗೆ ಮಂಜೂರು ಮಾಡಿದ್ದರು. ಅಲ್ಲಿ ಆಹಾರ ಸಂಬಂಧಿ ಉದ್ಯಮಗಳ ಸ್ಥಾಪನೆಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ನಿರ್ಧರಿಸಲಾಗಿತ್ತು. ಈಗ ಆ ಜಾಗ ಮಣ್ಣುಗಳ್ಳರ ನೆಲೆಯಾಗಿದೆ.</p>.<p>ವ್ಯವಸ್ಥಿತ ಜಾಲ: ಫುಡ್ ಕರ್ನಾಟಕ ಲಿಮಿಟೆಡ್ ಸಂಸ್ಥೆಯ ಕಚೇರಿ ಬೆಂಗಳೂರಿನಲ್ಲಿದೆ. ಸ್ಥಳೀಯವಾಗಿ ಯಾರೂ ಕೇಳೋರಿಲ್ಲ ಎಂಬುದನ್ನು ಗಮನಿಸಿರುವ ಮಣ್ಣು ಕಳ್ಳರ ಜಾಲ ವ್ಯವಸ್ಥಿತವಾಗಿಯೇ ಇಲ್ಲಿ ಮಣ್ಣಿನ ಗಣಿಗಾರಿಕೆ ನಡೆಸಿದೆ.</p>.<p>‘ಸರ್ಕಾರಿ ಜಾಗದ ಮಣ್ಣು ಮಾರಾಟದಲ್ಲಿ ಸ್ಥಳೀಯರೂ ಕೈಜೋಡಿಸಿದ್ದು, ದೇವಸ್ಥಾನದ ಅಭಿವೃದ್ಧಿ ಹೆಸರಲ್ಲೂ ಮಣ್ಣು ಮಾರಾಟ ಆಗಿದೆ. ಫುಡ್ ಪಾರ್ಕ್ ಜಾಗ ಮಾತ್ರವಲ್ಲ ಪಕ್ಕದ ವಿನಾಯಕ ನಗರ ಕೆರೆ, ಓತಿಘಟ್ಟದ ಕೆರೆಯ ಜಾಗದಲ್ಲೂ ಮಣ್ಣು ಕದಿಯಲಾಗುತ್ತಿದೆ. ಇಲ್ಲೆಲ್ಲ ಮಣ್ಣು ಲೂಟಿ ಈಚಿನದ್ದಲ್ಲ. ಐದಾದು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ’ ಎಂದು ಪಕ್ಕದ ಸಂತೆಕಡೂರು ಗ್ರಾಮದ ಕೃಷಿಕ ಎನ್.ಎಂ.ಶಿವಶಂಕರ್ ಹೇಳುತ್ತಾರೆ.</p>.<p>ಪಿಡಿಒಗೆ ಬೆದರಿಕೆ, ಎಫ್ಐಆರ್ ದಾಖಲು: ಅಕ್ರಮವಾಗಿ ಮಣ್ಣು ಕೊಂಡೊಯ್ಯುವುದನ್ನು ನಿಲ್ಲಿಸಲು ಹೋದ ಸೋಗಾನೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗೂ ಈಚೆಗೆ ಬೆದರಿಕೆ ಹಾಕಲಾಗಿದೆ. ಅವಾಚ್ಯ ಶಬ್ಧಗಳಿಂದ ನಿಂದಿಸಲಾಗಿದೆ. ವಿನಾಯಕ ನಗರ ಕೆರೆಯಲ್ಲಿ ಮಣ್ಣು ತೆಗೆದಿರುವ ಬಗ್ಗೆ ಪಿಡಿಒ ಸುನಂದಾ ಗುರುವಾರ ತುಂಗಾ ನಗರ ಠಾಣೆಗೆ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.</p>.<p>ಓತಿಘಟ್ಟದ ಕೆರೆಯ ದೂರು ದಾಖಲು ವಿಚಾರದಲ್ಲಿ ಶಾಸಕರೊಬ್ಬರು ಪೊಲೀಸರ ಮೇಲೆ ಒತ್ತಡ ಹೇರಿ ಅದಕ್ಕೆ ತಡೆ ಹಾಕಿದ್ದಾರೆ ಎಂದು ಮೂಲಗಳು ಹೇಳುತ್ತವೆ.</p>.<p>ಅಧಿಕಾರಿಗಳದ್ದೇ ನೆರವು?: ನಗರದಿಂದ ಕೂಗಳತೆಯ ದೂರದ ಸರ್ಕಾರಿ ಜಾಗದಲ್ಲಿ ವರ್ಷಗಳಿಂದ ಅಕ್ರಮವಾಗಿ ಮಣ್ಣು ತೆಗೆಯುತ್ತಿದ್ದರೂ ಜಿಲ್ಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ಚರ್ಚೆಗೆ ಗ್ರಾಸವಾಗಿದೆ.</p>.<p>‘ಮೇ 13ರವರೆಗೂ ಅಲ್ಲಿ ಮಣ್ಣು ತೆಗೆಯಲಾಗಿದೆ. ಮರುದಿನ ಲೋಕಾಯುಕ್ತ ಪೊಲೀಸರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಿಢೀರ್ ಭೇಟಿ ಕೊಟ್ಟ ವೇಳೆ ಅಲ್ಲಿ ಯಾರೂ ಇರಲಿಲ್ಲ. ಪರಿಶೀಲನಾ ತಂಡ ಸ್ಥಳಕ್ಕೆ ಬರುವ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಚೇರಿಯಿಂದಲೇ ಮಣ್ಣುಗಳ್ಳರಿಗೆ ಮಾಹಿತಿ ಹೋಗಿರಬಹುದು’ ಎಂದು ಅಧಿಕಾರಿಯೊಬ್ಬರು ಶಂಕಿಸಿದ್ದಾರೆ.</p>.<p><strong>ಸಿಬ್ಬಂದಿ ಕೊರತೆ: ‘</strong>ಸಂಸ್ಥೆಯಿಂದ 2024ರ ಫೆಬ್ರುವರಿ 26, ಡಿಸೆಂಬರ್ 24 ಹಾಗೂ 2025ರ ಜೂನ್ 6ರಂದು ಮೂರು ಬಾರಿ ಶಿವಮೊಗ್ಗ ಜಿಲ್ಲಾಡಳಿತಕ್ಕೆ ಪತ್ರ ಬರೆಯಲಾಗಿದೆ. ಆದರೂ ಯಾವುದೇ ಕ್ರಮ ಆಗಿಲ್ಲ’ ಎಂದು ಫುಡ್ ಕರ್ನಾಟಕ ಲಿಮಿಟೆಡ್ ವ್ಯವಸ್ಥಾಪಕ ರಮೇಶ್ ಹೇಳುತ್ತಾರೆ.</p>.<p>ಮಣ್ಣು ಲೂಟಿ ಆಗುತ್ತಿರುವುದು ಎರಡು ವರ್ಷಗಳ ಹಿಂದೆಯೇ ಗಮನಕ್ಕೆ ಬಂದಿದ್ದರೂ ಮುಂದುವರಿದಿರುವುದಕ್ಕೆ ಸಂಸ್ಥೆಯ ಕಚೇರಿ ಬೆಂಗಳೂರಿನಲ್ಲಿ ಇರುವುದು ಹಾಗೂ ಸಿಬ್ಬಂದಿ ಕೊರತೆ ಇರುವುದನ್ನು ಉಲ್ಲೇಖಿಸಿ ಅವರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.</p>.<p><strong>ವರದಿ ಕೇಳಿದ ಲೋಕಾಯುಕ್ತ</strong></p><p>ಸರ್ಕಾರಿ ಜಾಗದಲ್ಲಿನ ಅಗಾಧ ಪ್ರಮಾಣದ ಮಣ್ಣು ಕಳವು ಮಾಡಿರುವ ಬಗ್ಗೆ ಸ್ಥಳೀಯ ನಿವಾಸಿಯೊಬ್ಬರು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಅವರಿಗೆ ದೂರು ನೀಡಿದ್ದಾರೆ. ಅದನ್ನು ಆಧರಿಸಿ ಸ್ಥಳೀಯ ಅಧಿಕಾರಿಗಳಿಂದ ಲೋಕಾಯುಕ್ತರು ವರದಿ ಕೇಳಿದ್ದಾರೆ.</p><p>ಹೀಗಾಗಿ ಗುರುವಾರ ಶಿವಮೊಗ್ಗ ಲೋಕಾಯುಕ್ತ ಅಧಿಕಾರಿಗಳ ನೇತೃತ್ವದಲ್ಲಿ ಗಣಿ ಮತ್ತು ಭೂವಿಜ್ಞಾನ, ಕಂದಾಯ, ಸರ್ವೆ ಸೇರಿ ಬೇರೆ ಬೇರೆ ಇಲಾಖೆಗಳ 25 ಅಧಿಕಾರಿಗಳ ತಂಡ ಸ್ಥಳ ಪರಿಶೀಲಿಸಿ ಮಹಜರು ಮಾಡಿದೆ.</p>.<p><strong>ಗುಂಡಿ ಮುಚ್ಚಲು ₹ 50 ಕೋಟಿ ಬೇಕಿದೆ!</strong></p><p>ಫುಡ್ ಪಾರ್ಕ್ ಜಾಗದಲ್ಲಿ ನಡೆದ ಪರಿಶೀಲನೆ ವೇಳೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಾಥಮಿಕ ಅಂದಾಜಿನಂತೆ 10 ಲಕ್ಷ ಮೆಟ್ರಿಕ್ ಟನ್ ಮಣ್ಣು ತೆಗೆಯಲಾಗಿದೆ. ಅಂದಾಜು 1 ಲಕ್ಷ ಲೋಡ್ ಮಣ್ಣು ಅಲ್ಲಿಂದ ಸಾಗಣೆಯಾಗಿದೆ. ಈಗ ಮಣ್ಣು ತೆಗೆದ ಜಾಗದ ಗುಂಡಿ ಮುಚ್ಚಿ ಸಮತಟ್ಟು ಮಾಡಲು ಬರೋಬ್ಬರಿ ₹ 50 ಕೋಟಿ ಬೇಕಿದೆ ಎಂದು ಪರಿಶೀಲನಾ ತಂಡದಲ್ಲಿದ್ದ ಅಧಿಕಾರಿಯೊಬ್ಬರು 'ಪ್ರಜಾವಾಣಿ'ಗೆ ತಿಳಿಸಿದರು.</p><p>ಆಯುಷ್ ವಿ.ವಿ ಜಾಗದ ಮೇಲೂ ಕಣ್ಣು: ಮಣ್ಣುಗಳ್ಳರು ಬರೀ ಫುಡ್ ಪಾರ್ಕ್ ಜಾಗ ಮಾತ್ರವಲ್ಲ ಪಕ್ಕದಲ್ಲಿ ಆಯುಷ್ ವಿಶ್ವವಿದ್ಯಾಲಯಕ್ಕೆ ಮೀಸಲಿಟ್ಟ 100 ಎಕರೆ ಜಾಗದ ಮೇಲೂ ಕಣ್ಣು ಹಾಕಿದ್ದಾರೆ. ಅದರಲ್ಲಿ ಒಂದು ಎಕರೆಯಷ್ಟು ಜಾಗದಲ್ಲಿ ಮಣ್ಣು ತೆಗೆದಿರುವುದು ಗುರುವಾರ ನಡೆದ ಸ್ಥಳ ಪರಿಶೀಲನೆ ವೇಳೆ ಕಂಡುಬಂದಿದೆ.</p>.<div><blockquote>ಫುಡ್ ಪಾರ್ಕ್ ಹಾಗೂ ಸುತ್ತಲಿನ ಸ್ಥಳದ ವಾಸ್ತವ ಸ್ಥಿತಿ, ಸರ್ಕಾರಕ್ಕೆ ಆಗಿರುವ ನಷ್ಟದ ಪ್ರಮಾಣದ ವರದಿಯನ್ನು ಶೀಘ್ರ ಲೋಕಾಯುಕ್ತರಿಗೆ ಸಲ್ಲಿಸಿ, ಅವರ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು</blockquote><span class="attribution"> ಬಿ.ಪಿ.ಚಂದ್ರಶೇಖರ್, ಲೋಕಾಯುಕ್ತ ಡಿವೈಎಸ್ಪಿ, ಶಿವಮೊಗ್ಗ</span></div>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260516-42-1148262493</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ:</strong> ಇಲ್ಲಿನ ಸೋಗಾನೆ ವಿಮಾನ ನಿಲ್ದಾಣದ ಹಿಂಭಾಗದಲ್ಲಿ ರಾಜ್ಯ ಸರ್ಕಾರ ಫುಡ್ ಪಾರ್ಕ್ ನಿರ್ಮಿಸಲೆಂದು ಮೀಸಲಿಟ್ಟಿದ್ದ 97.36 ಎಕರೆ ಜಾಗ ಈಗ ‘ಮಣ್ಣುಗಳ್ಳ’ರ ಆಡಂಬೋಲವಾಗಿದೆ. ಆರು ವರ್ಷಗಳ ಅವಧಿಯಲ್ಲಿ ಅಲ್ಲಿನ 10 ಲಕ್ಷ ಮೆಟ್ರಿಕ್ ಟನ್ ಮಣ್ಣು ಕದಿಯಲಾಗಿದೆ.</p>.<p>ಕಳವು ಮಾಡಿದ ಮಣ್ಣನ್ನು ಲೇಔಟ್ಗಳ ನಿರ್ಮಾಣ, ರಸ್ತೆ ಕಾಮಗಾರಿ ಹಾಗೂ ಅಡಿಕೆ ತೋಟಗಳಿಗೆ ಬಳಸಲಾಗಿದೆ. ಫುಡ್ಪಾರ್ಕ್ನ ಬಹಳಷ್ಟು ಜಾಗದಲ್ಲಿ 10ರಿಂದ 20 ಅಡಿಯ ಆಳದವರೆಗೆ ಮಣ್ಣು ಬಗೆದು ಸಾಗಿಸಲಾಗಿದ್ದು, ಸಮತಟ್ಟಾಗಿದ್ದ ಜಾಗ ಹಲವು ಕಡೆ ಈಗ ಕೃಷಿ ಹೊಂಡಗಳಂತೆ ಕಾಣುತ್ತಿದೆ.</p>.<p>ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಸೋಗಾನೆಯ ಸರ್ವೆ ನಂ. 120ರಲ್ಲಿ 97.36 ಎಕರೆ ಜಾಗವನ್ನು ರಾಜ್ಯ ಸರ್ಕಾರದ ಉದ್ಯಮ ಫುಡ್ ಕರ್ನಾಟಕ ಲಿಮಿಟೆಡ್ಗೆ ಮಂಜೂರು ಮಾಡಿದ್ದರು. ಅಲ್ಲಿ ಆಹಾರ ಸಂಬಂಧಿ ಉದ್ಯಮಗಳ ಸ್ಥಾಪನೆಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ನಿರ್ಧರಿಸಲಾಗಿತ್ತು. ಈಗ ಆ ಜಾಗ ಮಣ್ಣುಗಳ್ಳರ ನೆಲೆಯಾಗಿದೆ.</p>.<p>ವ್ಯವಸ್ಥಿತ ಜಾಲ: ಫುಡ್ ಕರ್ನಾಟಕ ಲಿಮಿಟೆಡ್ ಸಂಸ್ಥೆಯ ಕಚೇರಿ ಬೆಂಗಳೂರಿನಲ್ಲಿದೆ. ಸ್ಥಳೀಯವಾಗಿ ಯಾರೂ ಕೇಳೋರಿಲ್ಲ ಎಂಬುದನ್ನು ಗಮನಿಸಿರುವ ಮಣ್ಣು ಕಳ್ಳರ ಜಾಲ ವ್ಯವಸ್ಥಿತವಾಗಿಯೇ ಇಲ್ಲಿ ಮಣ್ಣಿನ ಗಣಿಗಾರಿಕೆ ನಡೆಸಿದೆ.</p>.<p>‘ಸರ್ಕಾರಿ ಜಾಗದ ಮಣ್ಣು ಮಾರಾಟದಲ್ಲಿ ಸ್ಥಳೀಯರೂ ಕೈಜೋಡಿಸಿದ್ದು, ದೇವಸ್ಥಾನದ ಅಭಿವೃದ್ಧಿ ಹೆಸರಲ್ಲೂ ಮಣ್ಣು ಮಾರಾಟ ಆಗಿದೆ. ಫುಡ್ ಪಾರ್ಕ್ ಜಾಗ ಮಾತ್ರವಲ್ಲ ಪಕ್ಕದ ವಿನಾಯಕ ನಗರ ಕೆರೆ, ಓತಿಘಟ್ಟದ ಕೆರೆಯ ಜಾಗದಲ್ಲೂ ಮಣ್ಣು ಕದಿಯಲಾಗುತ್ತಿದೆ. ಇಲ್ಲೆಲ್ಲ ಮಣ್ಣು ಲೂಟಿ ಈಚಿನದ್ದಲ್ಲ. ಐದಾದು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ’ ಎಂದು ಪಕ್ಕದ ಸಂತೆಕಡೂರು ಗ್ರಾಮದ ಕೃಷಿಕ ಎನ್.ಎಂ.ಶಿವಶಂಕರ್ ಹೇಳುತ್ತಾರೆ.</p>.<p>ಪಿಡಿಒಗೆ ಬೆದರಿಕೆ, ಎಫ್ಐಆರ್ ದಾಖಲು: ಅಕ್ರಮವಾಗಿ ಮಣ್ಣು ಕೊಂಡೊಯ್ಯುವುದನ್ನು ನಿಲ್ಲಿಸಲು ಹೋದ ಸೋಗಾನೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗೂ ಈಚೆಗೆ ಬೆದರಿಕೆ ಹಾಕಲಾಗಿದೆ. ಅವಾಚ್ಯ ಶಬ್ಧಗಳಿಂದ ನಿಂದಿಸಲಾಗಿದೆ. ವಿನಾಯಕ ನಗರ ಕೆರೆಯಲ್ಲಿ ಮಣ್ಣು ತೆಗೆದಿರುವ ಬಗ್ಗೆ ಪಿಡಿಒ ಸುನಂದಾ ಗುರುವಾರ ತುಂಗಾ ನಗರ ಠಾಣೆಗೆ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.</p>.<p>ಓತಿಘಟ್ಟದ ಕೆರೆಯ ದೂರು ದಾಖಲು ವಿಚಾರದಲ್ಲಿ ಶಾಸಕರೊಬ್ಬರು ಪೊಲೀಸರ ಮೇಲೆ ಒತ್ತಡ ಹೇರಿ ಅದಕ್ಕೆ ತಡೆ ಹಾಕಿದ್ದಾರೆ ಎಂದು ಮೂಲಗಳು ಹೇಳುತ್ತವೆ.</p>.<p>ಅಧಿಕಾರಿಗಳದ್ದೇ ನೆರವು?: ನಗರದಿಂದ ಕೂಗಳತೆಯ ದೂರದ ಸರ್ಕಾರಿ ಜಾಗದಲ್ಲಿ ವರ್ಷಗಳಿಂದ ಅಕ್ರಮವಾಗಿ ಮಣ್ಣು ತೆಗೆಯುತ್ತಿದ್ದರೂ ಜಿಲ್ಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ಚರ್ಚೆಗೆ ಗ್ರಾಸವಾಗಿದೆ.</p>.<p>‘ಮೇ 13ರವರೆಗೂ ಅಲ್ಲಿ ಮಣ್ಣು ತೆಗೆಯಲಾಗಿದೆ. ಮರುದಿನ ಲೋಕಾಯುಕ್ತ ಪೊಲೀಸರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಿಢೀರ್ ಭೇಟಿ ಕೊಟ್ಟ ವೇಳೆ ಅಲ್ಲಿ ಯಾರೂ ಇರಲಿಲ್ಲ. ಪರಿಶೀಲನಾ ತಂಡ ಸ್ಥಳಕ್ಕೆ ಬರುವ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಚೇರಿಯಿಂದಲೇ ಮಣ್ಣುಗಳ್ಳರಿಗೆ ಮಾಹಿತಿ ಹೋಗಿರಬಹುದು’ ಎಂದು ಅಧಿಕಾರಿಯೊಬ್ಬರು ಶಂಕಿಸಿದ್ದಾರೆ.</p>.<p><strong>ಸಿಬ್ಬಂದಿ ಕೊರತೆ: ‘</strong>ಸಂಸ್ಥೆಯಿಂದ 2024ರ ಫೆಬ್ರುವರಿ 26, ಡಿಸೆಂಬರ್ 24 ಹಾಗೂ 2025ರ ಜೂನ್ 6ರಂದು ಮೂರು ಬಾರಿ ಶಿವಮೊಗ್ಗ ಜಿಲ್ಲಾಡಳಿತಕ್ಕೆ ಪತ್ರ ಬರೆಯಲಾಗಿದೆ. ಆದರೂ ಯಾವುದೇ ಕ್ರಮ ಆಗಿಲ್ಲ’ ಎಂದು ಫುಡ್ ಕರ್ನಾಟಕ ಲಿಮಿಟೆಡ್ ವ್ಯವಸ್ಥಾಪಕ ರಮೇಶ್ ಹೇಳುತ್ತಾರೆ.</p>.<p>ಮಣ್ಣು ಲೂಟಿ ಆಗುತ್ತಿರುವುದು ಎರಡು ವರ್ಷಗಳ ಹಿಂದೆಯೇ ಗಮನಕ್ಕೆ ಬಂದಿದ್ದರೂ ಮುಂದುವರಿದಿರುವುದಕ್ಕೆ ಸಂಸ್ಥೆಯ ಕಚೇರಿ ಬೆಂಗಳೂರಿನಲ್ಲಿ ಇರುವುದು ಹಾಗೂ ಸಿಬ್ಬಂದಿ ಕೊರತೆ ಇರುವುದನ್ನು ಉಲ್ಲೇಖಿಸಿ ಅವರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.</p>.<p><strong>ವರದಿ ಕೇಳಿದ ಲೋಕಾಯುಕ್ತ</strong></p><p>ಸರ್ಕಾರಿ ಜಾಗದಲ್ಲಿನ ಅಗಾಧ ಪ್ರಮಾಣದ ಮಣ್ಣು ಕಳವು ಮಾಡಿರುವ ಬಗ್ಗೆ ಸ್ಥಳೀಯ ನಿವಾಸಿಯೊಬ್ಬರು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಅವರಿಗೆ ದೂರು ನೀಡಿದ್ದಾರೆ. ಅದನ್ನು ಆಧರಿಸಿ ಸ್ಥಳೀಯ ಅಧಿಕಾರಿಗಳಿಂದ ಲೋಕಾಯುಕ್ತರು ವರದಿ ಕೇಳಿದ್ದಾರೆ.</p><p>ಹೀಗಾಗಿ ಗುರುವಾರ ಶಿವಮೊಗ್ಗ ಲೋಕಾಯುಕ್ತ ಅಧಿಕಾರಿಗಳ ನೇತೃತ್ವದಲ್ಲಿ ಗಣಿ ಮತ್ತು ಭೂವಿಜ್ಞಾನ, ಕಂದಾಯ, ಸರ್ವೆ ಸೇರಿ ಬೇರೆ ಬೇರೆ ಇಲಾಖೆಗಳ 25 ಅಧಿಕಾರಿಗಳ ತಂಡ ಸ್ಥಳ ಪರಿಶೀಲಿಸಿ ಮಹಜರು ಮಾಡಿದೆ.</p>.<p><strong>ಗುಂಡಿ ಮುಚ್ಚಲು ₹ 50 ಕೋಟಿ ಬೇಕಿದೆ!</strong></p><p>ಫುಡ್ ಪಾರ್ಕ್ ಜಾಗದಲ್ಲಿ ನಡೆದ ಪರಿಶೀಲನೆ ವೇಳೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಾಥಮಿಕ ಅಂದಾಜಿನಂತೆ 10 ಲಕ್ಷ ಮೆಟ್ರಿಕ್ ಟನ್ ಮಣ್ಣು ತೆಗೆಯಲಾಗಿದೆ. ಅಂದಾಜು 1 ಲಕ್ಷ ಲೋಡ್ ಮಣ್ಣು ಅಲ್ಲಿಂದ ಸಾಗಣೆಯಾಗಿದೆ. ಈಗ ಮಣ್ಣು ತೆಗೆದ ಜಾಗದ ಗುಂಡಿ ಮುಚ್ಚಿ ಸಮತಟ್ಟು ಮಾಡಲು ಬರೋಬ್ಬರಿ ₹ 50 ಕೋಟಿ ಬೇಕಿದೆ ಎಂದು ಪರಿಶೀಲನಾ ತಂಡದಲ್ಲಿದ್ದ ಅಧಿಕಾರಿಯೊಬ್ಬರು 'ಪ್ರಜಾವಾಣಿ'ಗೆ ತಿಳಿಸಿದರು.</p><p>ಆಯುಷ್ ವಿ.ವಿ ಜಾಗದ ಮೇಲೂ ಕಣ್ಣು: ಮಣ್ಣುಗಳ್ಳರು ಬರೀ ಫುಡ್ ಪಾರ್ಕ್ ಜಾಗ ಮಾತ್ರವಲ್ಲ ಪಕ್ಕದಲ್ಲಿ ಆಯುಷ್ ವಿಶ್ವವಿದ್ಯಾಲಯಕ್ಕೆ ಮೀಸಲಿಟ್ಟ 100 ಎಕರೆ ಜಾಗದ ಮೇಲೂ ಕಣ್ಣು ಹಾಕಿದ್ದಾರೆ. ಅದರಲ್ಲಿ ಒಂದು ಎಕರೆಯಷ್ಟು ಜಾಗದಲ್ಲಿ ಮಣ್ಣು ತೆಗೆದಿರುವುದು ಗುರುವಾರ ನಡೆದ ಸ್ಥಳ ಪರಿಶೀಲನೆ ವೇಳೆ ಕಂಡುಬಂದಿದೆ.</p>.<div><blockquote>ಫುಡ್ ಪಾರ್ಕ್ ಹಾಗೂ ಸುತ್ತಲಿನ ಸ್ಥಳದ ವಾಸ್ತವ ಸ್ಥಿತಿ, ಸರ್ಕಾರಕ್ಕೆ ಆಗಿರುವ ನಷ್ಟದ ಪ್ರಮಾಣದ ವರದಿಯನ್ನು ಶೀಘ್ರ ಲೋಕಾಯುಕ್ತರಿಗೆ ಸಲ್ಲಿಸಿ, ಅವರ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು</blockquote><span class="attribution"> ಬಿ.ಪಿ.ಚಂದ್ರಶೇಖರ್, ಲೋಕಾಯುಕ್ತ ಡಿವೈಎಸ್ಪಿ, ಶಿವಮೊಗ್ಗ</span></div>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260516-42-1148262493</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>