ಏ. 15ರಿಂದ 30ರವರೆಗೆ ನಗರದ ಎಲ್ಲಾ ಚರಂಡಿ, ಕಾಲುವೆಯ ಹೂಳೆತ್ತಲು ಟೆಂಡರ್ ಆಗಿದೆ. ಪಾಲಿಕೆ ಅಧಿಕಾರಿಗಳು ಮತ್ತು ತಹಶೀಲ್ದಾರ್ ನೇತೃತ್ವದ ತಂಡ ಈಗ ಆಗಿರುವ ಮಳೆ ಹಾನಿಯ ಅಂದಾಜು ಮಾಡಲಿದ್ದಾರೆ
ಮಾಯಣ್ಣಗೌಡ, ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ
ಮಳೆಗಾಲದಲ್ಲಿ ರಾಜಕಾಲುವೆಯಿಂದ ಮನೆಗಳಿಗೆ ನೀರು ನುಗ್ಗುವ ಬಗ್ಗೆ ಹಲವು ಬಾರಿ ಪಾಲಿಕೆಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನಮಗೆ ಈ ನರಕ ದರ್ಶನ, ಸಂಕಟ ತಪ್ಪುತ್ತಿಲ್ಲ
ಗೌರಮ್ಮ, ಶರಾವತಿ ನಗರ ನಿವಾಸಿ
ಪಾಲಿಕೆಯವರು ರಾಜಕಾಲುವೆಯ ದುರಸ್ತಿಯ ಜೊತೆಗೆ ಒತ್ತುವರಿ ತೆರವುಗೊಳಿಸಿದಲ್ಲಿ ನೀರು ಸರಾಗವಾಗಿ ಹರಿಯಲಿದೆ. ಮಳೆಗಾಲ ಆರಂಭಕ್ಕೆ ಮುನ್ನ ಕ್ರಮ ಕೈಗೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಿ