<p><strong>ಶಿವಮೊಗ್ಗ:</strong> ಇಲ್ಲಿನ ತ್ಯಾವರೆಕೊಪ್ಪ ಹುಲಿ ಸಿಂಹಧಾಮದಲ್ಲಿ ಈಚೆಗೆ ತರಬೇತಿ ನಿರತ ಪಶು ವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ಸಾವಿಗೆ ಕಾರಣವಾಗಿದ್ದ ನೀರಾನೆ ಹಂಸಿಣಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ.</p>.<p>ಎಂಟು ವರ್ಷ ವಯಸ್ಸಿನ ‘ಹಂಸಿಣಿ’ ದಿನ ತುಂಬಿದರೂ ಪ್ರಸವವಾಗದೇ ಮರಿ ಹೊಟ್ಟೆಯಲ್ಲಿಯೇ ಮೃತಪಟ್ಟಿದೆ. ಮೃತ ಮರಿಯನ್ನು ಹೊರ ತೆಗೆಯು ವುದು ಸಾಧ್ಯವಾಗದ್ದರಿಂದ ಸೋಂಕಿಗೆ ತುತ್ತಾಗಿದೆ.</p>.<p>ಆಹಾರ ಸೇವಿಸುವುದನ್ನೇ ಬಿಟ್ಟಿರುವ ‘ಹಂಸಿಣಿ’ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಪಶು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ನೀರಾನೆ ಬಡಕ ಲಾಗಿದ್ದು, ಸೋಮವಾರದಿಂದ ಪೋಲ್ಸಿರಿಂಜ್ ಮೂಲಕ ಆಹಾರ ಮತ್ತು ಔಷಧಿ ಕೊಡಲಾಗುತ್ತಿದೆ’ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಮರಾಕ್ಷರ ತಿಳಿಸಿದ್ದಾರೆ.</p>.<p>‘ಹಂಸಿಣಿಯ ಆರೋಗ್ಯ ಸುಧಾರಣೆಗೆ ಗರ್ಭದಲ್ಲೇ ಮೃತಪಟ್ಟಿ ರುವ ಮರಿಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಬೇಕಿದೆ. ಶಸ್ತ್ರಚಿಕಿತ್ಸೆಗೆಅಗತ್ಯವಿರುವ ಉಪಕರಣ ಹಾಗೂ ತಜ್ಞರ ತಂಡ ಒಳಗೊಂಡ ಅಗತ್ಯ ಸೌಲಭ್ಯ ಗುಜರಾತ್ನಲ್ಲಿರುವ ಮುಖೇಶ್ಅಂಬಾನಿ ಒಡೆತನದ ವಂತೇರಾ ವನ್ಯಧಾಮದಲ್ಲಿ ಮಾತ್ರ ಇದೆ. ಇದುಹಂಸಿಣಿಯ ಆರೋಗ್ಯ ರಕ್ಷಣೆ ವಿಚಾರ ದಲ್ಲಿ ಸವಾಲುಗಳಿಗೆ ಕಾರಣವಾಗಿದೆ' ಎಂದು ಮೂಲಗಳು ತಿಳಿಸಿವೆ.</p>.<p>ಗರ್ಭಿಣಿ ಆಗಿದ್ದ ಹಂಸಿಣಿ ಆಹಾರ ಸೇವಿಸುತ್ತಿಲ್ಲ ಎಂಬ ಕಾರಣಕ್ಕೆ ಮಾರ್ಚ್ 19ರ ರಾತ್ರಿ ಡಾ.ಸಮೀಕ್ಷಾ ಅದರ ಆರೋಗ್ಯ ತಪಾಸಣೆಗೆ ಮುಂದಾಗಿದ್ದರು. ಆಗ ನೀರಾನೆ ದಾಳಿ ನಡೆಸಿತ್ತು. ಗಾಯಗೊಂಡಿದ್ದ ಅವರು ಶಿವಮೊಗ್ಗದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.</p>.<p>‘ಹಂಸಿಣಿ’ಗೆ ಗರ್ಭಪಾತ ಆಗಿದೆ ಎಂದು ಮೂಲಗಳು ತಿಳಿಸಿದ್ದವು. ಆದರೆ, ಪ್ರಸವ ಪೂರ್ವದಲ್ಲೇ ಮರಿ ಗರ್ಭದಲ್ಲೇ ಮೃತಪಟ್ಟಿದ್ದರಿಂದ ಆರೋಗ್ಯ ಸ್ಥಿತಿ ಹದಗೆಡುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ:</strong> ಇಲ್ಲಿನ ತ್ಯಾವರೆಕೊಪ್ಪ ಹುಲಿ ಸಿಂಹಧಾಮದಲ್ಲಿ ಈಚೆಗೆ ತರಬೇತಿ ನಿರತ ಪಶು ವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ಸಾವಿಗೆ ಕಾರಣವಾಗಿದ್ದ ನೀರಾನೆ ಹಂಸಿಣಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ.</p>.<p>ಎಂಟು ವರ್ಷ ವಯಸ್ಸಿನ ‘ಹಂಸಿಣಿ’ ದಿನ ತುಂಬಿದರೂ ಪ್ರಸವವಾಗದೇ ಮರಿ ಹೊಟ್ಟೆಯಲ್ಲಿಯೇ ಮೃತಪಟ್ಟಿದೆ. ಮೃತ ಮರಿಯನ್ನು ಹೊರ ತೆಗೆಯು ವುದು ಸಾಧ್ಯವಾಗದ್ದರಿಂದ ಸೋಂಕಿಗೆ ತುತ್ತಾಗಿದೆ.</p>.<p>ಆಹಾರ ಸೇವಿಸುವುದನ್ನೇ ಬಿಟ್ಟಿರುವ ‘ಹಂಸಿಣಿ’ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಪಶು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ನೀರಾನೆ ಬಡಕ ಲಾಗಿದ್ದು, ಸೋಮವಾರದಿಂದ ಪೋಲ್ಸಿರಿಂಜ್ ಮೂಲಕ ಆಹಾರ ಮತ್ತು ಔಷಧಿ ಕೊಡಲಾಗುತ್ತಿದೆ’ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಮರಾಕ್ಷರ ತಿಳಿಸಿದ್ದಾರೆ.</p>.<p>‘ಹಂಸಿಣಿಯ ಆರೋಗ್ಯ ಸುಧಾರಣೆಗೆ ಗರ್ಭದಲ್ಲೇ ಮೃತಪಟ್ಟಿ ರುವ ಮರಿಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಬೇಕಿದೆ. ಶಸ್ತ್ರಚಿಕಿತ್ಸೆಗೆಅಗತ್ಯವಿರುವ ಉಪಕರಣ ಹಾಗೂ ತಜ್ಞರ ತಂಡ ಒಳಗೊಂಡ ಅಗತ್ಯ ಸೌಲಭ್ಯ ಗುಜರಾತ್ನಲ್ಲಿರುವ ಮುಖೇಶ್ಅಂಬಾನಿ ಒಡೆತನದ ವಂತೇರಾ ವನ್ಯಧಾಮದಲ್ಲಿ ಮಾತ್ರ ಇದೆ. ಇದುಹಂಸಿಣಿಯ ಆರೋಗ್ಯ ರಕ್ಷಣೆ ವಿಚಾರ ದಲ್ಲಿ ಸವಾಲುಗಳಿಗೆ ಕಾರಣವಾಗಿದೆ' ಎಂದು ಮೂಲಗಳು ತಿಳಿಸಿವೆ.</p>.<p>ಗರ್ಭಿಣಿ ಆಗಿದ್ದ ಹಂಸಿಣಿ ಆಹಾರ ಸೇವಿಸುತ್ತಿಲ್ಲ ಎಂಬ ಕಾರಣಕ್ಕೆ ಮಾರ್ಚ್ 19ರ ರಾತ್ರಿ ಡಾ.ಸಮೀಕ್ಷಾ ಅದರ ಆರೋಗ್ಯ ತಪಾಸಣೆಗೆ ಮುಂದಾಗಿದ್ದರು. ಆಗ ನೀರಾನೆ ದಾಳಿ ನಡೆಸಿತ್ತು. ಗಾಯಗೊಂಡಿದ್ದ ಅವರು ಶಿವಮೊಗ್ಗದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.</p>.<p>‘ಹಂಸಿಣಿ’ಗೆ ಗರ್ಭಪಾತ ಆಗಿದೆ ಎಂದು ಮೂಲಗಳು ತಿಳಿಸಿದ್ದವು. ಆದರೆ, ಪ್ರಸವ ಪೂರ್ವದಲ್ಲೇ ಮರಿ ಗರ್ಭದಲ್ಲೇ ಮೃತಪಟ್ಟಿದ್ದರಿಂದ ಆರೋಗ್ಯ ಸ್ಥಿತಿ ಹದಗೆಡುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>