<p>ಶಿವಮೊಗ್ಗ: ‘ರಂಗಭೂಮಿ ಸಮಾಜದ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಿಂತನೆಗಳನ್ನು ರೂಪಿಸುವ ಮಹತ್ವದ ಕಲೆಯಾಗಿದೆ. ಜನಸಾಮಾನ್ಯರಿಗೆ ಉತ್ತಮ ಸಂದೇಶ ಸಾರಲು ಇದು ಬಹುದೊಡ್ಡ ಮಾಧ್ಯಮ’ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಹೇಳಿದರು.</p>.<p>ನಗರದ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯ ಮತ್ತು ಎನ್ಇಎಸ್ ಹವ್ಯಾಸಿ ರಂಗ ವೇದಿಕೆಯ ವತಿಯಿಂದ ಗುರುವಾರ ಎಸ್.ಆರ್.ಎನ್.ಎಂ ಕಾಲೇಜು ಸಭಾಂಗಣದಲ್ಲಿ ಏರ್ಪಡಿ ಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ವಿಭಿನ್ನ ಪ್ರಕಾರಗಳು ಒಂದೆಡೆ ಸೇರಿ ಪ್ರದರ್ಶನಗೊಳ್ಳುವಂತಹ ವಿಶೇಷತೆ ನಾಟಕದ ಮೂಲಕ ಸಾಧ್ಯ. ಕಲೆಯು ಜೀವಂತವಾಗಿರಬೇಕು ಎಂಬುದು ಅತ್ಯಂತ ಮುಖ್ಯ. ನಾಟಕ ದಲ್ಲಿ ಜೀವಂತಿಕೆ ಇದ್ದಾಗ ಮಾತ್ರ ಅದು ಪ್ರೇಕ್ಷಕರ ಮನಸ್ಸನ್ನು ಸ್ಪರ್ಶಿಸುತ್ತದೆ. ಕಲೆ ಜನರ ಬದುಕಿನ ಪ್ರತಿಬಿಂಬವಾಗಿರಬೇಕು’ ಎಂದು ಹೇಳಿದರು.</p>.<p>‘ರಂಗದಲ್ಲಿ ಮನರಂಜನೆಯ ಜೊತೆಗೆ ಸಂದೇಶ ಸಾರುವತ್ತ ಹೆಚ್ಚು ಗಮನವಹಿಸಬೇಕು. ನಾಟಕದ ಸಂದೇಶಗಳು ಅನೇಕ ಜನ ಸಾಮಾನ್ಯರ ಬದುಕನ್ನು ಬದಲಿಸಿದೆ. ಬಿ.ಇಡಿ ವಿದ್ಯಾರ್ಥಿಗಳು ರಂಗ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ತರಗತಿಗಳಲ್ಲಿ ವಿದ್ಯಾರ್ಥಿಗಳನ್ನು ಪರಿಣಾಮಕಾರಿಯಾಗಿ ತಲುಪಬಹುದು’ ಎಂದು ರಂಗಕರ್ಮಿ ಬಿ.ಆರ್.ರೇಣುಕಪ್ಪ ಸಲಹೆ ನೀಡಿದರು.</p>.<p>ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಎನ್.ಕೆ.ಚಿದಾನಂದ ಮಾತನಾಡಿ, ‘ರಂಗಭೂಮಿ ಎಂಬುದು ಮನಸ್ಸುಗಳ ಕಟ್ಟುವ ಕಲೆ. ಇಲ್ಲಿ ನಟನೆಯ ನೇರ ಅನುಷ್ಠಾನವು ವೇದಿಕೆಯ ಮೇಲೆ ನಡೆಯುತ್ತದೆ’ ಎಂದು ಹೇಳಿದರು.</p>.<p>ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಪಿ.ನಾರಾಯಣ್ ಮಾತನಾಡಿದರು. ಇದೇ ವೇಳೆ ಯಕ್ಷಗಾನ ಕಲಾವಿದ ಪರಮೇಶ್ವರ ಹೆಗಡೆ ಐನಬೈಲು ಹಾಗೂ ಬಿ.ಆರ್.ರೇಣುಕಪ್ಪ ಅವರನ್ನು ಅಭಿನಂದಿಸಲಾಯಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260403-42-876771523</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿವಮೊಗ್ಗ: ‘ರಂಗಭೂಮಿ ಸಮಾಜದ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಿಂತನೆಗಳನ್ನು ರೂಪಿಸುವ ಮಹತ್ವದ ಕಲೆಯಾಗಿದೆ. ಜನಸಾಮಾನ್ಯರಿಗೆ ಉತ್ತಮ ಸಂದೇಶ ಸಾರಲು ಇದು ಬಹುದೊಡ್ಡ ಮಾಧ್ಯಮ’ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಹೇಳಿದರು.</p>.<p>ನಗರದ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯ ಮತ್ತು ಎನ್ಇಎಸ್ ಹವ್ಯಾಸಿ ರಂಗ ವೇದಿಕೆಯ ವತಿಯಿಂದ ಗುರುವಾರ ಎಸ್.ಆರ್.ಎನ್.ಎಂ ಕಾಲೇಜು ಸಭಾಂಗಣದಲ್ಲಿ ಏರ್ಪಡಿ ಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ವಿಭಿನ್ನ ಪ್ರಕಾರಗಳು ಒಂದೆಡೆ ಸೇರಿ ಪ್ರದರ್ಶನಗೊಳ್ಳುವಂತಹ ವಿಶೇಷತೆ ನಾಟಕದ ಮೂಲಕ ಸಾಧ್ಯ. ಕಲೆಯು ಜೀವಂತವಾಗಿರಬೇಕು ಎಂಬುದು ಅತ್ಯಂತ ಮುಖ್ಯ. ನಾಟಕ ದಲ್ಲಿ ಜೀವಂತಿಕೆ ಇದ್ದಾಗ ಮಾತ್ರ ಅದು ಪ್ರೇಕ್ಷಕರ ಮನಸ್ಸನ್ನು ಸ್ಪರ್ಶಿಸುತ್ತದೆ. ಕಲೆ ಜನರ ಬದುಕಿನ ಪ್ರತಿಬಿಂಬವಾಗಿರಬೇಕು’ ಎಂದು ಹೇಳಿದರು.</p>.<p>‘ರಂಗದಲ್ಲಿ ಮನರಂಜನೆಯ ಜೊತೆಗೆ ಸಂದೇಶ ಸಾರುವತ್ತ ಹೆಚ್ಚು ಗಮನವಹಿಸಬೇಕು. ನಾಟಕದ ಸಂದೇಶಗಳು ಅನೇಕ ಜನ ಸಾಮಾನ್ಯರ ಬದುಕನ್ನು ಬದಲಿಸಿದೆ. ಬಿ.ಇಡಿ ವಿದ್ಯಾರ್ಥಿಗಳು ರಂಗ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ತರಗತಿಗಳಲ್ಲಿ ವಿದ್ಯಾರ್ಥಿಗಳನ್ನು ಪರಿಣಾಮಕಾರಿಯಾಗಿ ತಲುಪಬಹುದು’ ಎಂದು ರಂಗಕರ್ಮಿ ಬಿ.ಆರ್.ರೇಣುಕಪ್ಪ ಸಲಹೆ ನೀಡಿದರು.</p>.<p>ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಎನ್.ಕೆ.ಚಿದಾನಂದ ಮಾತನಾಡಿ, ‘ರಂಗಭೂಮಿ ಎಂಬುದು ಮನಸ್ಸುಗಳ ಕಟ್ಟುವ ಕಲೆ. ಇಲ್ಲಿ ನಟನೆಯ ನೇರ ಅನುಷ್ಠಾನವು ವೇದಿಕೆಯ ಮೇಲೆ ನಡೆಯುತ್ತದೆ’ ಎಂದು ಹೇಳಿದರು.</p>.<p>ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಪಿ.ನಾರಾಯಣ್ ಮಾತನಾಡಿದರು. ಇದೇ ವೇಳೆ ಯಕ್ಷಗಾನ ಕಲಾವಿದ ಪರಮೇಶ್ವರ ಹೆಗಡೆ ಐನಬೈಲು ಹಾಗೂ ಬಿ.ಆರ್.ರೇಣುಕಪ್ಪ ಅವರನ್ನು ಅಭಿನಂದಿಸಲಾಯಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260403-42-876771523</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>