<p><strong>ಶಿವಮೊಗ್ಗ:</strong> ಲಕ್ಕವಳ್ಳಿಯ ಭದ್ರಾ ಹಾಗೂ ಗಾಜನೂರಿನ ತುಂಗಾ ಜಲಾಶಯಗಳಲ್ಲಿ ನೀರಿನ ಸಂಗ್ರಹಮಟ್ಟ ಕಳೆದ ವರ್ಷಕ್ಕಿಂತ ಹೆಚ್ಚಿದ್ದು, ಈ ಬಾರಿ ಬೇಸಿಗೆಯ ಬಾಯಾರಿಕೆ ನೀಗಿಸಲಿವೆ. </p>.<p>ಶಿವಮೊಗ್ಗ, ದಾವಣಗೆರೆ, ವಿಜಯನಗರ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ರೈತರು ಕೃಷಿಗೆ ಭದ್ರಾ ಜಲಾಶಯವನ್ನು ಅವಲಂಬಿದ್ದಾರೆ. ತುಂಗಾ ಜಲಾಶಯ ಶಿವಮೊಗ್ಗ ನಗರಕ್ಕೆ ಕುಡಿಯುವ ನೀರಿನ ಮೂಲವಾಗಿದೆ.</p>.<p><strong>ಬೇಸಿಗೆ ಬೆಳೆಗೆ ನೀರು: </strong>186 ಅಡಿ ನೀರು ಸಂಗ್ರಹಣಾ ಸಾಮರ್ಥ್ಯದ ಭದ್ರಾ ಜಲಾಶಯದಲ್ಲಿ ಸೋಮವಾರ 150.1 ಅಡಿ ನೀರು ಸಂಗ್ರಹ ಇದ್ದು, ಕಳೆದ ವರ್ಷ ಇದೇ ದಿನ (ಏ.20) 148.4 ಅಡಿ ನೀರಿನ ಸಂಗ್ರಹ ಇತ್ತು. ಸದ್ಯ ಜಲಾಶಯದಲ್ಲಿ 34.362 ಟಿಎಂಸಿ ಅಡಿ ನೀರು ಇದೆ. ಅದರಲ್ಲಿ 14 ಟಿಎಂಸಿ ಅಡಿ ಡೆಡ್ ಸ್ಟೋರೇಜ್ ಆಗಿದ್ದು, 20 ಟಿಎಂಸಿ ಅಡಿ ನೀರು ಬಳಕೆಗೆ ಲಭ್ಯವಾಗಲಿದೆ.</p>.<p>ಇದರಲ್ಲಿ 8 ಟಿಎಂಸಿ ಅಡಿ ನೀರನ್ನು ಭದ್ರಾ ಎಡದಂಡೆ ಹಾಗೂ ಬಲದಂಡೆ ನಾಲೆಗಳಿಗೆ ಮೇ 8ರವರೆಗೆ ಬೇಸಿಗೆ ಬೆಳೆಗೆ ಹರಿಸಬೇಕಿದೆ. ನಿತ್ಯ ಬಲದಂಡೆ ನಾಲೆಗೆ 2,650 ಕ್ಯುಸೆಕ್ ಹಾಗೂ ಎಡದಂಡೆ ನಾಲೆಗೆ 380 ಕ್ಯುಸೆಕ್ ಹರಿಸಲಾಗುತ್ತಿದೆ.</p>.<p>ಕೃಷಿಗೆ ಮಾತ್ರವಲ್ಲ ದಾವಣಗೆರೆ, ಹಾವೇರಿ, ಗದಗ, ವಿಜಯನಗರ ಜಿಲ್ಲೆಗಳ ತುಂಗಭದ್ರಾ ನದಿ ವ್ಯಾಪ್ತಿಯ ನಗರ, ಪಟ್ಟಣಗಳಿಗೆ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಗೆ 3.5 ಟಿಎಂಸಿ ಅಡಿ ನೀರನ್ನು ಭದ್ರಾ ಜಲಾಶಯದಿಂದಲೇ ಹರಿಸಲಾಗುತ್ತಿದೆ. ಈಗ ವಿಪರೀತ ಬಿಸಿಲು ಇದ್ದು, ಇದೇ ಹವೆ ಮುಂದುವರೆದರೆ ಜೂನ್ ಹೊತ್ತಿಗೆ ಜಲಾಶಯದಲ್ಲಿನ 2.5 ಟಿಎಂಸಿ ಅಡಿ ನೀರು ಆವಿಯಾಗಲಿದೆ. ಆಗ ಬಳಕೆಗೆ ಉಳಿಯುವ ಏಳು ಟಿಎಂಸಿ ಅಡಿ ನೀರನ್ನು ಮುಂದೆ ಮಳೆ ವಿಳಂಬವಾದಲ್ಲಿ ಬೆಳೆಯ ಸ್ಥಿತಿಗತಿ ಆಧರಿಸಿ ಕುಡಿಯಲು ಹಾಗೂ ಕೃಷಿ ಉದ್ದೇಶಕ್ಕೆ ಬಳಸಲಾಗುತ್ತದೆ ಎಂದು ಕರ್ನಾಟಕ ನೀರಾವರಿ ನಿಗಮದ ಭದ್ರಾ ಯೋಜನಾ ವಿಭಾಗದ ಸೂಪರಿಟೆಂಡೆಂಟ್ ಎಂಜಿನಿಯರ್ ಎಂ.ರವಿಕುಮಾರ್ ’ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>2.66 ಟಿಎಂಸಿ ಅಡಿ ಲಭ್ಯ: </strong>ಶಿವಮೊಗ್ಗ ನಗರಕ್ಕೆ ಕುಡಿಯುವ ನೀರಿನ ಮೂಲ ಗಾಜನೂರಿನ ತುಂಗಾ ಜಲಾಶಯ. 588.24 ಮೀಟರ್ ನೀರು ಸಂಗ್ರಹಣಾ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 587.21 ಮೀಟರ್ ನೀರಿನ ಸಂಗ್ರಹವಿದೆ.</p>.<p>ಶಿವಮೊಗ್ಗಕ್ಕೆ ನಿತ್ಯ 35 ಕ್ಯುಸೆಕ್ ನೀರು ಕುಡಿಯಲು ಕೊಡುತ್ತಿದ್ದು, ತುಂಗಾ ಎಡದಂಡೆ ನಾಲೆಗೆ 111 ಕ್ಯುಸೆಕ್ ಹಾಗೂ ಬಲದಂಡೆಗೆ 120 ಕ್ಯುಸೆಕ್ ನೀರನ್ನು ಆನ್ ಹಾಗೂ ಆಫ್ ಮಾದರಿಯಲ್ಲಿ ಕೃಷಿಗೆ ನೀರು ಹರಿಸಲಾಗುತ್ತಿದೆ. ಕುಡಿಯಲು ಹಾಗೂ ಕೃಷಿ ಉದ್ದೇಶಕ್ಕೆ ಮುಂದಿನ 45 ದಿನಗಳವರೆಗೆ 0.20 ಟಿಎಂಸಿ ಅಡಿಯಷ್ಟು ನೀರು ಬೇಕಿದೆ ಎಂದು ತುಂಗಾ ಯೋಜನಾ ಪ್ರದೇಶದ ಎಇಇ ತಾಯೇಶ್ ಕುಮಾರ್ ಹೇಳುತ್ತಾರೆ.</p>.<p>‘ಜಲಾಶಯದಲ್ಲಿ 2.66 ಟಿಎಂಸಿ ಅಡಿ ನೀರು ಇದ್ದು, ಅದರಲ್ಲಿ ಡೆಡ್ ಸ್ಟೋರೇಜ್ ಕಳೆದರೆ ಬಳಕೆಗೆ 1.84 ಟಿಎಂಸಿ ಅಡಿ ಲಭ್ಯವಾಗಲಿದೆ. ಹೀಗಾಗಿ ಈ ಬೇಸಿಗೆಯಲ್ಲಿ ಕುಡಿಯಲು ಹಾಗೂ ಕೃಷಿ ಉದ್ದೇಶಕ್ಕೆ ನೀರು ಕೊಡಲು ಯಾವುದೇ ತೊಂದರೆ ಇಲ್ಲ’ ಎಂದು ತಿಳಿಸಿದರು.</p>.<h2>ವಿದ್ಯುತ್ ಉತ್ಪಾದನೆಯೂ ಅಬಾಧಿತ</h2><p> ಕಾರ್ಗಲ್ನ ಲಿಂಗನಮಕ್ಕಿ ಜಲಾಶಯ 1819 ಅಡಿ ನೀರಿನ ಸಂಗ್ರಹಣಾ ಸಾಮರ್ಥ್ಯ ಹೊಂದಿದ್ದು ಸದ್ಯ 1772 ಅಡಿ ನೀರು ಜಲಾಶಯದಲ್ಲಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1776.45 ಅಡಿ ನೀರಿನ ಸಂಗ್ರಹ ಇತ್ತು. ಈಗ ಜಲಾಶಯದ ಸಂಗ್ರಹಣಾ ಸಾಮರ್ಥ್ಯದ ಶೇ 27.96ರಷ್ಟು ನೀರು ಲಭ್ಯವಿದೆ. ಅದರಲ್ಲಿ 1340 ದಶಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆ ಸಾಧ್ಯವಿದೆ. ಹೀಗಾಗಿ ಬೇಸಿಗೆಯಲ್ಲಿ ಗ್ರಿಡ್ನ ಬೇಡಿಕೆಯಷ್ಟು ವಿದ್ಯುತ್ ಉತ್ಪಾದನೆಗೆ ತೊಂದರೆ ಇಲ್ಲ ಎಂದು ಕೆಪಿಸಿ ಮುಖ್ಯ ಎಂಜಿನಿಯರ್ ಆನಂದ್ ಹೇಳುತ್ತಾರೆ. ಇದು ಜಲವಿದ್ಯುತ್ ಆಗಿರುವುದರಿಂದ ಬೇಡಿಕೆಯ ಸಮಯ ಹಾಗೂ ಪ್ರಮಾಣದ ಅನುಗುಣವಾಗಿ ಉತ್ಪಾದನೆ ಪ್ರಮಾಣ ನಿರ್ಧರಿಸುತ್ತೇವೆ ಎಂದು ತಿಳಿಸಿದರು.</p>.<div><blockquote>ಭದ್ರಾ–ತುಂಗಾ ಜಲಾಶಯಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅಧಿಕ ಸಂಗ್ರಹ ಇದೆ. ಪೂರ್ಣ ಪ್ರಮಾಣದಲ್ಲಿ ಮಳೆ ಆರಂಭವಾಗುವವರೆಗೂ ಕುಡಿಯಲು ಹಾಗೂ ಕೃಷಿ ಉದ್ದೇಶಕ್ಕೆ ಬಳಕೆಗೆ ಯಾವುದೇ ಸಮಸ್ಯೆ ಇಲ್ಲ.</blockquote><span class="attribution">–ಎಸ್.ರವಿಕುಮಾರ್, ಸೂಪರಿಂಟೆಂಡೆಂಟ್ ಎಂಜಿನಿಯರ್ ಕರ್ನಾಟಕ ನೀರಾವರಿ ನಿಗಮ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ:</strong> ಲಕ್ಕವಳ್ಳಿಯ ಭದ್ರಾ ಹಾಗೂ ಗಾಜನೂರಿನ ತುಂಗಾ ಜಲಾಶಯಗಳಲ್ಲಿ ನೀರಿನ ಸಂಗ್ರಹಮಟ್ಟ ಕಳೆದ ವರ್ಷಕ್ಕಿಂತ ಹೆಚ್ಚಿದ್ದು, ಈ ಬಾರಿ ಬೇಸಿಗೆಯ ಬಾಯಾರಿಕೆ ನೀಗಿಸಲಿವೆ. </p>.<p>ಶಿವಮೊಗ್ಗ, ದಾವಣಗೆರೆ, ವಿಜಯನಗರ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ರೈತರು ಕೃಷಿಗೆ ಭದ್ರಾ ಜಲಾಶಯವನ್ನು ಅವಲಂಬಿದ್ದಾರೆ. ತುಂಗಾ ಜಲಾಶಯ ಶಿವಮೊಗ್ಗ ನಗರಕ್ಕೆ ಕುಡಿಯುವ ನೀರಿನ ಮೂಲವಾಗಿದೆ.</p>.<p><strong>ಬೇಸಿಗೆ ಬೆಳೆಗೆ ನೀರು: </strong>186 ಅಡಿ ನೀರು ಸಂಗ್ರಹಣಾ ಸಾಮರ್ಥ್ಯದ ಭದ್ರಾ ಜಲಾಶಯದಲ್ಲಿ ಸೋಮವಾರ 150.1 ಅಡಿ ನೀರು ಸಂಗ್ರಹ ಇದ್ದು, ಕಳೆದ ವರ್ಷ ಇದೇ ದಿನ (ಏ.20) 148.4 ಅಡಿ ನೀರಿನ ಸಂಗ್ರಹ ಇತ್ತು. ಸದ್ಯ ಜಲಾಶಯದಲ್ಲಿ 34.362 ಟಿಎಂಸಿ ಅಡಿ ನೀರು ಇದೆ. ಅದರಲ್ಲಿ 14 ಟಿಎಂಸಿ ಅಡಿ ಡೆಡ್ ಸ್ಟೋರೇಜ್ ಆಗಿದ್ದು, 20 ಟಿಎಂಸಿ ಅಡಿ ನೀರು ಬಳಕೆಗೆ ಲಭ್ಯವಾಗಲಿದೆ.</p>.<p>ಇದರಲ್ಲಿ 8 ಟಿಎಂಸಿ ಅಡಿ ನೀರನ್ನು ಭದ್ರಾ ಎಡದಂಡೆ ಹಾಗೂ ಬಲದಂಡೆ ನಾಲೆಗಳಿಗೆ ಮೇ 8ರವರೆಗೆ ಬೇಸಿಗೆ ಬೆಳೆಗೆ ಹರಿಸಬೇಕಿದೆ. ನಿತ್ಯ ಬಲದಂಡೆ ನಾಲೆಗೆ 2,650 ಕ್ಯುಸೆಕ್ ಹಾಗೂ ಎಡದಂಡೆ ನಾಲೆಗೆ 380 ಕ್ಯುಸೆಕ್ ಹರಿಸಲಾಗುತ್ತಿದೆ.</p>.<p>ಕೃಷಿಗೆ ಮಾತ್ರವಲ್ಲ ದಾವಣಗೆರೆ, ಹಾವೇರಿ, ಗದಗ, ವಿಜಯನಗರ ಜಿಲ್ಲೆಗಳ ತುಂಗಭದ್ರಾ ನದಿ ವ್ಯಾಪ್ತಿಯ ನಗರ, ಪಟ್ಟಣಗಳಿಗೆ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಗೆ 3.5 ಟಿಎಂಸಿ ಅಡಿ ನೀರನ್ನು ಭದ್ರಾ ಜಲಾಶಯದಿಂದಲೇ ಹರಿಸಲಾಗುತ್ತಿದೆ. ಈಗ ವಿಪರೀತ ಬಿಸಿಲು ಇದ್ದು, ಇದೇ ಹವೆ ಮುಂದುವರೆದರೆ ಜೂನ್ ಹೊತ್ತಿಗೆ ಜಲಾಶಯದಲ್ಲಿನ 2.5 ಟಿಎಂಸಿ ಅಡಿ ನೀರು ಆವಿಯಾಗಲಿದೆ. ಆಗ ಬಳಕೆಗೆ ಉಳಿಯುವ ಏಳು ಟಿಎಂಸಿ ಅಡಿ ನೀರನ್ನು ಮುಂದೆ ಮಳೆ ವಿಳಂಬವಾದಲ್ಲಿ ಬೆಳೆಯ ಸ್ಥಿತಿಗತಿ ಆಧರಿಸಿ ಕುಡಿಯಲು ಹಾಗೂ ಕೃಷಿ ಉದ್ದೇಶಕ್ಕೆ ಬಳಸಲಾಗುತ್ತದೆ ಎಂದು ಕರ್ನಾಟಕ ನೀರಾವರಿ ನಿಗಮದ ಭದ್ರಾ ಯೋಜನಾ ವಿಭಾಗದ ಸೂಪರಿಟೆಂಡೆಂಟ್ ಎಂಜಿನಿಯರ್ ಎಂ.ರವಿಕುಮಾರ್ ’ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>2.66 ಟಿಎಂಸಿ ಅಡಿ ಲಭ್ಯ: </strong>ಶಿವಮೊಗ್ಗ ನಗರಕ್ಕೆ ಕುಡಿಯುವ ನೀರಿನ ಮೂಲ ಗಾಜನೂರಿನ ತುಂಗಾ ಜಲಾಶಯ. 588.24 ಮೀಟರ್ ನೀರು ಸಂಗ್ರಹಣಾ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 587.21 ಮೀಟರ್ ನೀರಿನ ಸಂಗ್ರಹವಿದೆ.</p>.<p>ಶಿವಮೊಗ್ಗಕ್ಕೆ ನಿತ್ಯ 35 ಕ್ಯುಸೆಕ್ ನೀರು ಕುಡಿಯಲು ಕೊಡುತ್ತಿದ್ದು, ತುಂಗಾ ಎಡದಂಡೆ ನಾಲೆಗೆ 111 ಕ್ಯುಸೆಕ್ ಹಾಗೂ ಬಲದಂಡೆಗೆ 120 ಕ್ಯುಸೆಕ್ ನೀರನ್ನು ಆನ್ ಹಾಗೂ ಆಫ್ ಮಾದರಿಯಲ್ಲಿ ಕೃಷಿಗೆ ನೀರು ಹರಿಸಲಾಗುತ್ತಿದೆ. ಕುಡಿಯಲು ಹಾಗೂ ಕೃಷಿ ಉದ್ದೇಶಕ್ಕೆ ಮುಂದಿನ 45 ದಿನಗಳವರೆಗೆ 0.20 ಟಿಎಂಸಿ ಅಡಿಯಷ್ಟು ನೀರು ಬೇಕಿದೆ ಎಂದು ತುಂಗಾ ಯೋಜನಾ ಪ್ರದೇಶದ ಎಇಇ ತಾಯೇಶ್ ಕುಮಾರ್ ಹೇಳುತ್ತಾರೆ.</p>.<p>‘ಜಲಾಶಯದಲ್ಲಿ 2.66 ಟಿಎಂಸಿ ಅಡಿ ನೀರು ಇದ್ದು, ಅದರಲ್ಲಿ ಡೆಡ್ ಸ್ಟೋರೇಜ್ ಕಳೆದರೆ ಬಳಕೆಗೆ 1.84 ಟಿಎಂಸಿ ಅಡಿ ಲಭ್ಯವಾಗಲಿದೆ. ಹೀಗಾಗಿ ಈ ಬೇಸಿಗೆಯಲ್ಲಿ ಕುಡಿಯಲು ಹಾಗೂ ಕೃಷಿ ಉದ್ದೇಶಕ್ಕೆ ನೀರು ಕೊಡಲು ಯಾವುದೇ ತೊಂದರೆ ಇಲ್ಲ’ ಎಂದು ತಿಳಿಸಿದರು.</p>.<h2>ವಿದ್ಯುತ್ ಉತ್ಪಾದನೆಯೂ ಅಬಾಧಿತ</h2><p> ಕಾರ್ಗಲ್ನ ಲಿಂಗನಮಕ್ಕಿ ಜಲಾಶಯ 1819 ಅಡಿ ನೀರಿನ ಸಂಗ್ರಹಣಾ ಸಾಮರ್ಥ್ಯ ಹೊಂದಿದ್ದು ಸದ್ಯ 1772 ಅಡಿ ನೀರು ಜಲಾಶಯದಲ್ಲಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1776.45 ಅಡಿ ನೀರಿನ ಸಂಗ್ರಹ ಇತ್ತು. ಈಗ ಜಲಾಶಯದ ಸಂಗ್ರಹಣಾ ಸಾಮರ್ಥ್ಯದ ಶೇ 27.96ರಷ್ಟು ನೀರು ಲಭ್ಯವಿದೆ. ಅದರಲ್ಲಿ 1340 ದಶಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆ ಸಾಧ್ಯವಿದೆ. ಹೀಗಾಗಿ ಬೇಸಿಗೆಯಲ್ಲಿ ಗ್ರಿಡ್ನ ಬೇಡಿಕೆಯಷ್ಟು ವಿದ್ಯುತ್ ಉತ್ಪಾದನೆಗೆ ತೊಂದರೆ ಇಲ್ಲ ಎಂದು ಕೆಪಿಸಿ ಮುಖ್ಯ ಎಂಜಿನಿಯರ್ ಆನಂದ್ ಹೇಳುತ್ತಾರೆ. ಇದು ಜಲವಿದ್ಯುತ್ ಆಗಿರುವುದರಿಂದ ಬೇಡಿಕೆಯ ಸಮಯ ಹಾಗೂ ಪ್ರಮಾಣದ ಅನುಗುಣವಾಗಿ ಉತ್ಪಾದನೆ ಪ್ರಮಾಣ ನಿರ್ಧರಿಸುತ್ತೇವೆ ಎಂದು ತಿಳಿಸಿದರು.</p>.<div><blockquote>ಭದ್ರಾ–ತುಂಗಾ ಜಲಾಶಯಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅಧಿಕ ಸಂಗ್ರಹ ಇದೆ. ಪೂರ್ಣ ಪ್ರಮಾಣದಲ್ಲಿ ಮಳೆ ಆರಂಭವಾಗುವವರೆಗೂ ಕುಡಿಯಲು ಹಾಗೂ ಕೃಷಿ ಉದ್ದೇಶಕ್ಕೆ ಬಳಕೆಗೆ ಯಾವುದೇ ಸಮಸ್ಯೆ ಇಲ್ಲ.</blockquote><span class="attribution">–ಎಸ್.ರವಿಕುಮಾರ್, ಸೂಪರಿಂಟೆಂಡೆಂಟ್ ಎಂಜಿನಿಯರ್ ಕರ್ನಾಟಕ ನೀರಾವರಿ ನಿಗಮ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>