ನೃತ್ಯ ಕಲಾವಿದೆ ಸಹನಾ ಚೇತನ್ ಮಾತನಾಡಿ, ‘ಕುಂತಿ, ದುರ್ಯೋಧನ, ಭೀಮನ ಪಾತ್ರಗಳನ್ನು ಕಲಾವಿದರು ಬಹಳ ಹುರುಪಿನಿಂದ ಅಭಿನಯಿಸಿದರು. ನಾಟಕದ ಮೂರನೇ ಭಾಗದಲ್ಲಿ ಶುಕಮುನಿ, ಭೀಷ್ಮ, ದ್ರೋಣರ ಪಾತ್ರದಲ್ಲಿ ಉತ್ತಮವಾಗಿ ಅಭಿನಯಿಸಿದರು. ಸಂಭಾಷಣೆ ಸ್ವಲ್ಪ ಮಟ್ಟಿಗೆ ಪ್ರೇಕ್ಷಕರಿಗೆ ಕಿರಿಕಿರಿ ತರುವಂತಿತ್ತು. ನಾಟಕದಲ್ಲಿ ನಿಯೋಗ ಪದ್ಧತಿ ಹೇಳುವಾಗ ವಂಶಾಭಿವೃದ್ಧಿಗೆ ಮಾನ್ಯತೆ ಇತ್ತು. ಆ ಮೂಲಕ ನಾಟಕದಲ್ಲಿ ಹೆಣ್ಣನ್ನು ಕಡೆಗಣಿಸಲಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.