ಶಿವಮೊಗ್ಗ: ಮಹಾನಗರ ಪಾಲಿಕೆ ಸದಸ್ಯೆ ಆರತಿ ಪ್ರಕಾಶ್ ಹಾಗೂ ವರ್ತಕ ಅ.ಮ. ಪ್ರಕಾಶ್ ಅವರ ಪುತ್ರ ಪ್ರತೀಶ್ರಾಮೇನಕೊಪ್ಪ ಸಮೀಪದ ಹಾಯ್ ಹೊಳೆ ತುಂಗಾ ನಾಲೆಯಲ್ಲಿ ಶುಕ್ರವಾರ ಈಜಲು ಹೋಗಿ ಕೊಚ್ವಿಕೊಂಡು ಹೋಗಿದ್ದಾರೆ.
ಪ್ರತೀಶ್ ಜನುಮದಿನದ ಸಂಭ್ರಮ ಆಚರಿಸಲು ಇಬ್ಬರು ಗೆಳೆಯರ ಜೊತೆಹೋಗಿದ್ದರು ಎನ್ನಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಕುಟುಂಬಸ್ಥರು ರಾತ್ರಿವರೆಗೂ ಪ್ರತೀಶ್ಗಾಗಿ ಹುಡುಕಾಟ ನಡೆಸಿದ್ದರು. ಯಾವುದೇ ಸುಳಿವು ಪತ್ತೆಯಾಗಿಲ್ಲ.