ಕರ್ನಾಟಕ ಸಂಘದ ಹಿಂದಿನ ಅಧ್ಯಕ್ಷೆ ವಿಜಯಾ ಶ್ರೀಧರ್ ಮಾತನಾಡಿ, ’ಮಹಿಳೆಯರಿಗೆ ಸಮಾಜ ಈಗಲೂ ಪೂರಕವಾಗಿಲ್ಲ. ಹೆಣ್ಣು ಭಯದಿಂದ ಬದುಕು ಸಾಗಿಸುವ ಸ್ಥಿತಿ ದೂರವಾಗಿಲ್ಲ. ಅತ್ಯಾಚಾರ, ಕೊಲೆ, ದರೋಡೆ ಮೂಲಕ ಹೆಣ್ಣನ್ನು ಶೋಷಣೆ ಮಾಡುತ್ತಲೇ ಇದ್ದಾರೆ. ಇತ್ತೀಚೆಗೆ ಮಾಧ್ಯಮದಲ್ಲಿ 'ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ ನಡೆದಿದೆ' ಎಂಬ ಸುದ್ದಿ ನೋಡುತ್ತಿದ್ದರೆ ಹೆಣ್ಣಿಗೆ ರಕ್ಷಣೆ ಎಲ್ಲಿದೆ ಅನ್ನಿಸಿತು. ಭಯದಲ್ಲಿ ಬದುಕುವ ಸ್ಥಿತಿ ತಲುಪಿದ್ದೇವೆ‘ ಎಂದು ಆತಂಕ ವ್ಯಕ್ತಪಡಿಸಿದರು.