ವರದಿ ಬರುವ ಮುನ್ನ ಸರ್ಕಾರಕ್ಕೆ ಎಚ್ಚರಿಸಲು ವಿವಿಧ ಜಿಲ್ಲೆಗಳಲ್ಲಿ ಪ್ರತಿಜ್ಞಾ ಪಂಚಾಯತ್ ಅಭಿಯಾನ ಹಾಗೂ ಜಾಗೃತಿ ಸಭೆಗಳ ನಡೆಸಲಾಗುತ್ತಿದೆ. ಅಭಿಯಾನದ ವೇಳಾಪಟ್ಟಿಯಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಆ. 16ರಂದು ಸಾಗರ, 17ರಂದು ಸೊರಬ, 18ರಂದು ಹೊಸನಗರ, 19ರಂದು ತೀರ್ಥಹಳ್ಳಿ, 20ರಂದು ಶಿಕಾರಿಪುರ, 21ರಂದು ಭದ್ರಾವತಿ, 23ರಂದು ಶಿವಮೊಗ್ಗ ನಗರದಲ್ಲಿ ಜಾಗೃತಿ ಸಭೆ ನಡೆಯಲಿದೆ. ಆ. 24ರಂದು ಶಿವಮೊಗ್ಗದಲ್ಲಿ ರ್ಯಾಲಿ ನಡೆಸಲಾಗುವುದು ಎಂದು ಹೇಳಿದರು.