ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲೆಯಲ್ಲಿ ಮುಳುಗುತ್ತಿದ್ದ ದೊಡ್ಡಪ್ಪನ ಮಗನ ರಕ್ಷಣೆಗೆ ಹೋಗಿ ಶಿಕ್ಷಕ ಸಾವು

Last Updated 19 ಏಪ್ರಿಲ್ 2022, 5:38 IST
ಅಕ್ಷರ ಗಾತ್ರ

ಹೊಳೆಹೊನ್ನೂರು: ಸಮೀಪದಭದ್ರಾ ನಾಲೆಯಲ್ಲಿ ಈಜಲು ತೆರಳಿದ್ದಾಗ ಮುಳುಗುತ್ತಿದ್ದ ದೊಡ್ಡಪ್ಪನ ಮಗನನ್ನು ರಕ್ಷಿಸಲು ಹೋಗಿ ಶಿಕ್ಷಕರೊಬ್ಬರು ಭಾನುವಾರ ಮುಳುಗಿ ಮೃತಪಟ್ಟಿದ್ದಾರೆ.

ಭದ್ರಾವತಿ ತಾಲ್ಲೂಕಿನ ಮಾರಶೆಟ್ಟಿಹಳ್ಳಿಯ ಅನುದಾನಿತ ಮಾರುತಿ ಪ್ರೌಢಶಾಲೆ ಸಹ ಶಿಕ್ಷಕ, ದಾನವಾಡಿ ಗ್ರಾಮದ ನಿವಾಸಿ ವಿಜಯ್ ಕುಮಾರ್ (50) ಮೃತಪಟ್ಟವರು.

ಅವರು ಭಾನುವಾರ ಮಧ್ಯಾಹ್ನ ತಮ್ಮ ದೊಡ್ಡಪ್ಪ, ದೊಡ್ಡಪ್ಪನ ಮಗ ಹಾಗೂ ನೆಂಟರೊಬ್ಬರ ಮಕ್ಕಳನ್ನು ಕರೆದುಕೊಂಡು ಭದ್ರಾ ನಾಲೆಗೆ ಈಜಲು ತೆರಳಿದ್ದರು.

ನಾಲೆಯಲ್ಲಿ ಈಜುವಾಗ ಜೊತೆಯಲ್ಲಿ ದೊಡ್ಡಪ್ಪನ ಮಗ ನೀರಿನ ಸೆಳವಿನಲ್ಲಿ ಕೊಚ್ಚಿ ಹೋಗಿದನ್ನು ನೋಡಿ ಅವರ ರಕ್ಷಣೆಗೆ ತೆರಳಿದಾಗ ಮುಳುಗಿ ಮೃತಪಟ್ಟಿದ್ದಾರೆ.

ಸಮೀಪದಲ್ಲಿ ಟ್ರ್ಯಾಕ್ಟರ್ ತೊಳೆಯುತ್ತಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗುತ್ತಿದ್ದ ವಿಜಯ್‌ಕುಮಾರ್‌ ಅವರ ದೊಡ್ಡಪ್ಪನ ಮಗನನ್ನು ರಕ್ಷಿಸಿದ್ದಾನೆ. ವಿಜಯ್‍ಕುಮಾರ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT