ಈವರೆಗೆ ಬಿಡುಗಡೆಯಾದ ಶಾಸಕರ ಪ್ರದೇಶಾಭಿವೃದ್ಧಿ ಅನುದಾನವನ್ನು ಗ್ರಾಮೀಣ ರಸ್ತೆ, ಸೇತುವೆ, ಚರಂಡಿ, ಗ್ರಂಥಾಲಯ ಕಟ್ಟಡ, ಶಾಲಾ ಕಾಲೇಜು ಆಸ್ಪತ್ರೆ ಕಟ್ಟಡಗಳಿಗೆ ಬಳಸಲಾಗಿದೆ. ರಂಗ ಮಂದಿರ, ಸಭಾಭವನ, ಆಟೊ ಸ್ಟ್ಯಾಂಡ್, ವಿಕಲಚೇತನರಿಗೆ ವಾಹನ, ಶ್ರವಣ ಸಾಧನ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಅಭಿವೃದ್ಧಿ ಕಾಮಗಾರಿಗಳಿಗೆ ವಿನಿಯೋಗಿಸಲಾಗಿದೆ. ಕುಡಿಯುವ ನೀರಿನ ಸೌಲಭ್ಯ, ರಕ್ತ ನಿಧಿ ಕೇಂದ್ರದ ಯಂತ್ರೋಪಕರಣ ಖರೀದಿಗಾಗಿ, ತೀರ್ಥಹಳ್ಳಿಯ ಜಯ ಚಾಮರಾಜೇಂದ್ರ ಆಸ್ಪತ್ರೆಯ ಕೊರೊನಾ ವಾರ್ಡ್ ದುರಸ್ತಿ, ದೇವಾಲಯ, ಸಹಕಾರ ಸಂಘಗಳ ಕಟ್ಟಡಗಳ ನೆಲಹಾಸು, ಚಾವಣಿ ದುರಸ್ತಿಯಂತಹ ಅಗತ್ಯ ಕಾಮಗಾರಿಗಳನ್ನು ಮಾಡಲಾಗಿದೆ.