<p><strong>ತೀರ್ಥಹಳ್ಳಿ</strong>: ‘ಆರೋಗ್ಯದ ದೃಷ್ಟಿಯಿಂದ ರಾಸಾಯನಿಕ ಮುಕ್ತ ಆಹಾರ ಹುಡುಕಾಟ ದೊಡ್ಡ ಸವಾಲಾಗಿ ಪರಿಣಮಿಸಿದೆ. ರುಚಿಗಾಗಿ ಪೌಡರ್ ಬಳಕೆ ಮಾಡುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ’ ಎಂದು ಶಾಸಕ ಆರಗ ಜ್ಞಾನೇಂದ್ರ ಕಳವಳ ವ್ಯಕ್ತಪಡಿಸಿದರು.</p>.<p>ಈಚೆಗೆ ಕ್ಯಾನ್ಸರ್ನಿಂದ ಮೃತಪಟ್ಟ ರಾಷ್ಟ್ರಮಟ್ಟದ ಕೊಕ್ಕೊ ಆಟಗಾರ್ತಿ ಅಚಲ ಹೆಗ್ಡೆ ಅವರ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ತೀರ್ಥಹಳ್ಳಿ ಭಾಗದ ಪ್ರತಿ 10 ಮನೆಯಲ್ಲಿ ಒಬ್ಬರಿಗೆ ಕ್ಯಾನ್ಸರ್ ಕಾಡುತ್ತಿದೆ. ಅಡಿಕೆ ಬಗ್ಗೆ ಪರಿಶೀಲಿಸಿದಾಗ ಅಂತಹ ಯಾವುದೇ ಅಡ್ಡಪರಿಣಾಮದ ಸುಳಿವು ಸಿಗಲಿಲ್ಲ. ಬದಲಾಗಿ ಅಡುಗೆ, ಆಹಾರ, ಜಂಕ್ಫುಡ್ ಮೇಲೆ ಅನುಮಾನ ಮೂಡುವಂತಹ ಸನ್ನಿವೇಶ ಸೃಷ್ಟಿಯಾಗಿದೆ’ ಎಂದು ಹೇಳಿದರು.</p>.<p>‘ಮಲೆನಾಡು ವಾತಾವರಣ ಆರೋಗ್ಯಕ್ಕೆ ಪೂರಕ ಎಂಬ ನಂಬಿಕೆ ದೂರವಾಗುತ್ತಿದೆ. ನಮ್ಮ ತರಕಾರಿ, ಎಣ್ಣೆ ವಿಷವಾಗಿವೆ. ತಜ್ಞ ವೈದ್ಯರಿಂದಲೂ ಚಿಕಿತ್ಸೆ ಕೊಡಲು ಸಾಧ್ಯವಾಗುತ್ತಿಲ್ಲ’ ಎಂದು ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ತಿಳಿಸಿದರು.</p>.<p>‘50 ವರ್ಷದ ಮಹಿಳೆಯರಲ್ಲಿ ಪಿತ್ತಕೋಶದ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಲಕ್ಷಣವಿಲ್ಲದ ಕಾಯಿಲೆಯಾದ್ದರಿಂದ ಆರಂಭದಲ್ಲಿ ಪತ್ತೆಯಾಗುವುದಿಲ್ಲ’ ಎಂದು ಅಚಲ ಹೆಗ್ಡೆ ಪುತ್ರ ಡಾ.ಸಾರ್ಥಕ್ ಕೆ.ಎಸ್. ಹೆಗ್ಡೆ ಹೇಳಿದರು.</p>.<p>ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಡಾ. ವಿನಯ ಶ್ರೀನಿವಾಸ್, ಪ್ರಮುಖರಾದ ಪ್ರಕಾಶ್, ಅನ್ನಪೂರ್ಣ, ನಾಗರಾಜ್, ಚೇತನ ಶ್ರೀಕಾಂತ್ ನುಡಿನಮನ ಸಲ್ಲಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260511-42-90167745</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೀರ್ಥಹಳ್ಳಿ</strong>: ‘ಆರೋಗ್ಯದ ದೃಷ್ಟಿಯಿಂದ ರಾಸಾಯನಿಕ ಮುಕ್ತ ಆಹಾರ ಹುಡುಕಾಟ ದೊಡ್ಡ ಸವಾಲಾಗಿ ಪರಿಣಮಿಸಿದೆ. ರುಚಿಗಾಗಿ ಪೌಡರ್ ಬಳಕೆ ಮಾಡುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ’ ಎಂದು ಶಾಸಕ ಆರಗ ಜ್ಞಾನೇಂದ್ರ ಕಳವಳ ವ್ಯಕ್ತಪಡಿಸಿದರು.</p>.<p>ಈಚೆಗೆ ಕ್ಯಾನ್ಸರ್ನಿಂದ ಮೃತಪಟ್ಟ ರಾಷ್ಟ್ರಮಟ್ಟದ ಕೊಕ್ಕೊ ಆಟಗಾರ್ತಿ ಅಚಲ ಹೆಗ್ಡೆ ಅವರ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ತೀರ್ಥಹಳ್ಳಿ ಭಾಗದ ಪ್ರತಿ 10 ಮನೆಯಲ್ಲಿ ಒಬ್ಬರಿಗೆ ಕ್ಯಾನ್ಸರ್ ಕಾಡುತ್ತಿದೆ. ಅಡಿಕೆ ಬಗ್ಗೆ ಪರಿಶೀಲಿಸಿದಾಗ ಅಂತಹ ಯಾವುದೇ ಅಡ್ಡಪರಿಣಾಮದ ಸುಳಿವು ಸಿಗಲಿಲ್ಲ. ಬದಲಾಗಿ ಅಡುಗೆ, ಆಹಾರ, ಜಂಕ್ಫುಡ್ ಮೇಲೆ ಅನುಮಾನ ಮೂಡುವಂತಹ ಸನ್ನಿವೇಶ ಸೃಷ್ಟಿಯಾಗಿದೆ’ ಎಂದು ಹೇಳಿದರು.</p>.<p>‘ಮಲೆನಾಡು ವಾತಾವರಣ ಆರೋಗ್ಯಕ್ಕೆ ಪೂರಕ ಎಂಬ ನಂಬಿಕೆ ದೂರವಾಗುತ್ತಿದೆ. ನಮ್ಮ ತರಕಾರಿ, ಎಣ್ಣೆ ವಿಷವಾಗಿವೆ. ತಜ್ಞ ವೈದ್ಯರಿಂದಲೂ ಚಿಕಿತ್ಸೆ ಕೊಡಲು ಸಾಧ್ಯವಾಗುತ್ತಿಲ್ಲ’ ಎಂದು ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ತಿಳಿಸಿದರು.</p>.<p>‘50 ವರ್ಷದ ಮಹಿಳೆಯರಲ್ಲಿ ಪಿತ್ತಕೋಶದ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಲಕ್ಷಣವಿಲ್ಲದ ಕಾಯಿಲೆಯಾದ್ದರಿಂದ ಆರಂಭದಲ್ಲಿ ಪತ್ತೆಯಾಗುವುದಿಲ್ಲ’ ಎಂದು ಅಚಲ ಹೆಗ್ಡೆ ಪುತ್ರ ಡಾ.ಸಾರ್ಥಕ್ ಕೆ.ಎಸ್. ಹೆಗ್ಡೆ ಹೇಳಿದರು.</p>.<p>ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಡಾ. ವಿನಯ ಶ್ರೀನಿವಾಸ್, ಪ್ರಮುಖರಾದ ಪ್ರಕಾಶ್, ಅನ್ನಪೂರ್ಣ, ನಾಗರಾಜ್, ಚೇತನ ಶ್ರೀಕಾಂತ್ ನುಡಿನಮನ ಸಲ್ಲಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260511-42-90167745</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>