<p><strong>ಶಿವಮೊಗ್ಗ:</strong> ಮನೆ ಖರೀದಿ ವಿಚಾರದ ವೈಮನಸ್ಸಿನ ಕಾರಣಕ್ಕೆ ಇಲ್ಲಿನ ಶರಾವತಿ ನಗರದ ಹಂದಿಜೋಗಿ ಬೀದಿಯಲ್ಲಿ ಮಂಗಳವಾರ ರಾತ್ರಿ ಮನೆಯ ಎದುರು ನಿಲ್ಲಿಸಿದ್ದ ಕಾರಿನ ಗಾಜುಗಳ ಒಡೆದು ಹಾಕಿದ್ದ ಆರೋಪದ ಮೇರೆಗೆ ಮೂವರನ್ನು ಇಲ್ಲಿನ ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>ವಿನೋಬನಗರದ ಚಾನೆಲ್ ಏರಿಯಾ 6ನೇ ಕ್ರಾಸ್ ನಿವಾಸಿ ಕೆ.ಶರತ್, ಮೇದಾರ ಕೇರಿ 2ನೇ ಕ್ರಾಸ್ ನಿವಾಸಿ ಎ.ಪ್ರಶಾಂತ್ ಹಾಗೂ ಶರಾವತಿ ನಗರ ಬಿ ಬ್ಲಾಕ್ 2ನೇ ಕ್ರಾಸ್ ನಿವಾಸಿ ಡಿ.ಸತೀಶ ಬಂಧಿತರು.</p>.<p>ಹಂದಿಜೋಗಿ ಬೀದಿಯ ನಿವಾಸಿ ಸುರೇಶ್ ಎಂಬುವವರ ಮನೆಯ ಮುಂಭಾಗ ನಿಲ್ಲಿಸಿದ್ದ ಕಾರಿನ ಗಾಜನ್ನು ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ರಾತ್ರಿ ಒಡೆದು ಹಾಕಿದ್ದರು. ಈ ಬಗ್ಗೆ ಸುರೇಶ್ ದೊಡ್ಡಪೇಟೆ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡಿದ್ದ ಪೊಲೀಸರು ಸಮೀಪದಲ್ಲಿದ್ದ ಸಿ.ಸಿ. ಟಿವಿ ದೃಶ್ಯಾವಳಿ ಆಧರಿಸಿ ಮೂವರನ್ನು ಬಂಧಿಸಿದ್ದಾರೆ. ದೂರುದಾರ ಸುರೇಶ ಖರೀದಿಸಬೇಕಿದ್ದ ಮನೆಯನ್ನು ಆರೋಪಿ ಸತೀಶ್ ಖರೀದಿಸಿದ್ದನು. ಈ ವಿಚಾರದಲ್ಲಿ ಇಬ್ಬರಿಗೂ ಜಗಳವಾಗಿತ್ತು. ಸತೀಶ್ ಈ ಸಂಗತಿಯನ್ನು ಸ್ನೇಹಿತರಾದ ಶರತ್ ಹಾಗೂ ಪ್ರಶಾಂತ್ ಎದುರು ಹೇಳಿಕೊಂಡಿದ್ದು, ಮೂವರು ಸೇರಿ ಸುರೇಶನನ್ನು ಹೆದರಿಸಲು ಕಾರಿನ ಮೇಲೆ ದಾಳಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಕೃತ್ಯದ ವೇಳೆ ಆರೋಪಿಗಳು ಗಾಂಜಾ ಸೇವಿಸಿರಲಿಲ್ಲ. ಬದಲಿಗೆ ಪಾನಮತ್ತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ:</strong> ಮನೆ ಖರೀದಿ ವಿಚಾರದ ವೈಮನಸ್ಸಿನ ಕಾರಣಕ್ಕೆ ಇಲ್ಲಿನ ಶರಾವತಿ ನಗರದ ಹಂದಿಜೋಗಿ ಬೀದಿಯಲ್ಲಿ ಮಂಗಳವಾರ ರಾತ್ರಿ ಮನೆಯ ಎದುರು ನಿಲ್ಲಿಸಿದ್ದ ಕಾರಿನ ಗಾಜುಗಳ ಒಡೆದು ಹಾಕಿದ್ದ ಆರೋಪದ ಮೇರೆಗೆ ಮೂವರನ್ನು ಇಲ್ಲಿನ ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>ವಿನೋಬನಗರದ ಚಾನೆಲ್ ಏರಿಯಾ 6ನೇ ಕ್ರಾಸ್ ನಿವಾಸಿ ಕೆ.ಶರತ್, ಮೇದಾರ ಕೇರಿ 2ನೇ ಕ್ರಾಸ್ ನಿವಾಸಿ ಎ.ಪ್ರಶಾಂತ್ ಹಾಗೂ ಶರಾವತಿ ನಗರ ಬಿ ಬ್ಲಾಕ್ 2ನೇ ಕ್ರಾಸ್ ನಿವಾಸಿ ಡಿ.ಸತೀಶ ಬಂಧಿತರು.</p>.<p>ಹಂದಿಜೋಗಿ ಬೀದಿಯ ನಿವಾಸಿ ಸುರೇಶ್ ಎಂಬುವವರ ಮನೆಯ ಮುಂಭಾಗ ನಿಲ್ಲಿಸಿದ್ದ ಕಾರಿನ ಗಾಜನ್ನು ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ರಾತ್ರಿ ಒಡೆದು ಹಾಕಿದ್ದರು. ಈ ಬಗ್ಗೆ ಸುರೇಶ್ ದೊಡ್ಡಪೇಟೆ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡಿದ್ದ ಪೊಲೀಸರು ಸಮೀಪದಲ್ಲಿದ್ದ ಸಿ.ಸಿ. ಟಿವಿ ದೃಶ್ಯಾವಳಿ ಆಧರಿಸಿ ಮೂವರನ್ನು ಬಂಧಿಸಿದ್ದಾರೆ. ದೂರುದಾರ ಸುರೇಶ ಖರೀದಿಸಬೇಕಿದ್ದ ಮನೆಯನ್ನು ಆರೋಪಿ ಸತೀಶ್ ಖರೀದಿಸಿದ್ದನು. ಈ ವಿಚಾರದಲ್ಲಿ ಇಬ್ಬರಿಗೂ ಜಗಳವಾಗಿತ್ತು. ಸತೀಶ್ ಈ ಸಂಗತಿಯನ್ನು ಸ್ನೇಹಿತರಾದ ಶರತ್ ಹಾಗೂ ಪ್ರಶಾಂತ್ ಎದುರು ಹೇಳಿಕೊಂಡಿದ್ದು, ಮೂವರು ಸೇರಿ ಸುರೇಶನನ್ನು ಹೆದರಿಸಲು ಕಾರಿನ ಮೇಲೆ ದಾಳಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಕೃತ್ಯದ ವೇಳೆ ಆರೋಪಿಗಳು ಗಾಂಜಾ ಸೇವಿಸಿರಲಿಲ್ಲ. ಬದಲಿಗೆ ಪಾನಮತ್ತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>