ಹೊನ್ನಾಳಿಯ ನಿವೇದಿತಾ ಬೆಂಗಳೂರಿನಿಂದ ತಮ್ಮ ಇಬ್ಬರು ಮಕ್ಕಳೊಂದಿಗೆ ರೈಲಿನಲ್ಲಿ ಬಂದಿದ್ದರು. ಬೋಗಿಯಲ್ಲಿದ್ದ ಫ್ಯಾನ್ಗೆ ತಮ್ಮದೇ ವೇಲ್ ಕಟ್ಟಿದ್ದನ್ನು ಗಮನಿಸಿದ ಸ್ವಚ್ಛತಾ ಸಿಬ್ಬಂದಿ ಈಕೆ ರೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಭಾವಿಸಿ, ಬಾಗಿಲು ತೆಗೆಯುವಂತೆ ಮನವೊಲಿಸಿದ್ದರು. ಬಾಗಿಲು ತೆಗೆದ ಬಳಿಕ ನಿವೇದಿತಾ ಮತ್ತು ಆಕೆಯ ಮಕ್ಕಳನ್ನು ಸಿಬ್ಬಂದಿ ರೈಲ್ವೆ ಪೊಲೀಸರಿಗೆ ಒಪ್ಪಿಸಿದ್ದರು.