ಸಾಗರ: ಸಾಹಿತ್ಯವನ್ನು ಜನಸಾಮಾನ್ಯರಿಗೂ ತಲುಪಿಸಿದ್ದು ವಚನ ಸಾಹಿತ್ಯದ ಹೆಗ್ಗಳಿಕೆ. ವಚನ ಸಾಹಿತ್ಯ ಇಂದಿಗೂ ಪ್ರಸ್ತುತವಾಗಿದೆ ಎಂದು ತಹಶೀಲ್ದಾರ್ ಮಲ್ಲೇಶ್ ಬಿ. ಪೂಜಾರ್ ಹೇಳಿದರು.
ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಶನಿವಾರ ನಡೆದ ಡಾ.ಫ.ಗು. ಹಳಕಟ್ಟಿ ಅವರ ಜನ್ಮದಿನ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯನ್ನು ಉದ್ಘಾಟಿಸಿಮಾತನಾಡಿದರು.
ವಚನಗಳ ಮೂಲಕ ಸಾಮಾಜಿಕ ಬದಲಾವಣೆಯನ್ನು ತರಲು ಮುಂದಾಗಿದ್ದು ಫ.ಗು. ಹಳಕಟ್ಟಿ ಅವರ ಕೆಲಸದ ವಿಶೇಷತೆ ಎಂದರು.
‘ಸಮಾನತೆಯ ಸಂದೇಶವನ್ನು ಸಾರಿದ ಕಾರಣಕ್ಕೆ ಸನ್ಮಾರ್ಗದತ್ತ ನಮ್ಮ ಬದುಕು ಸಾಗಲು ದಾರಿ ದೀವಿಗೆಯಾಗುವಂತಹ ಹಲವು ಸಂಗತಿಗಳು ವಚನ ಸಾಹಿತ್ಯದಲ್ಲಿದೆ’ ಎಂದು ಉಪನ್ಯಾಸ ನೀಡಿದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿ.ಟಿ. ಸ್ವಾಮಿ ಹೇಳಿದರು.
ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಜಿ. ಬಸವರಾಜ್, ಗ್ರೇಡ್ –2 ತಹಶೀಲ್ದಾರ್ ಪರಮೇಶ್ವರಪ್ಪ, ದೇವರಾಜ್, ದೀಕ್ಷಾ ಇದ್ದರು.