ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದುಷ್ಕೃತ್ಯ ಖಂಡಿಸಿದರೆ ಅಲ್ಪಸಂಖ್ಯಾತರಿಗೆ ನೋವು ಆಗುತ್ತದೆ ಎಂದು ಕಾಂಗ್ರೆಸ್ ದುಷ್ಕೃತ್ಯ ಖಂಡಿಸುವುದಿಲ್ಲ. ರಾಜ್ಯದಲ್ಲಿ ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗದಲ್ಲಿ ನಡೆದ ದುಷ್ಕೃತ್ಯಗಳಿಗೆ ಯಾವುದೇ ಜಾತಿ ಧರ್ಮ ಹಣೆ ಪಟ್ಟಿ ಕಟ್ಟುವುದು ಸರಿಯಲ್ಲ. ನಿಸ್ಸಂಶಯವಾಗಿ ಕೃತ್ಯಗಳನ್ನು ಖಂಡಿಸಬೇಕು. ಆದರೆ, ಕಾಂಗ್ರೆಸ್ನಿಂದ ಖಂಡನೆ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ತುದಿ ಮುಟ್ಟಿಸುತ್ತದೆ’ ಎಂದರು.