ಧರ್ಮೇಶ್, ಎಸ್.ಕುಮಾರ್ ಮಧ್ಯೆ ತೀವ್ರ ಪೈಪೋಟಿ: ತೀರ್ಥಹಳ್ಳಿ ತಾಲ್ಲೂಕಿನಲ್ಲಿ 4,804 ಮತಗಳಿದ್ದು, ಐವರು ಸ್ಪರ್ಧಾಕಾಂಕ್ಷಿಗಳು ಸ್ಪರ್ಧಿಸಿದ್ದರು. ಭದ್ರಾವತಿ ತಾಲ್ಲೂಕಿನಲ್ಲಿ 4,054 ಮತದಾರರು ಇದ್ದು, ಇಬ್ಬರು ಕಣದಲ್ಲಿ ಇದ್ದರು. ತೀರ್ಥಹಳ್ಳಿಯ ಉದ್ಯಮಿ ಎಸ್.ಕೆ. ಧರ್ಮೇಶ್ ಹಾಗೂ ಭದ್ರಾವತಿಯ ರಾಜಕಾರಣಿ ಎಸ್. ಕುಮಾರ್ ಮಧ್ಯೆ ಸಾಕಷ್ಟು ಸ್ಪರ್ಧೆ ಏರ್ಪಟ್ಟಿತ್ತು. ತೀರ್ಥಹಳ್ಳಿಯ ಎಸ್.ಕೆ. ಧರ್ಮೇಶ್ ಸಿರಿಬೈಲ್ ಅವರು ಒಕ್ಕಲಿಗರ ಸಂಘದ ಚುನಾವಣೆಗಾಗಿ ವರ್ಷದಿಂದ ಸಿದ್ಧತೆ ನಡೆಸಿದ್ದರು. ವಕೀಲ ಎಸ್.ವಿ. ಲೋಕೇಶ್, ಶಿವಮೊಗ್ಗದ ಕೆ.ಎಸ್. ರವಿಕುಮಾರ್ ಸಹ ಬಿರುಸಿನ ಪ್ರಚಾರ ಕೈಗೊಂಡಿದ್ದರು.