ನಗರದ ಸಿಮ್ಸ್ನಿಂದ ಸೈನ್ಸ್ ಮೈದಾನದವರೆಗೆ ನಡೆದ ಜಾಥಾದಲ್ಲಿ ಪಾಲ್ಗೊಂಡಿದ್ದ ಜನರು, ‘ಸ್ನೇಹ, ಶಾಂತಿ ನಮ್ಮ ಉಸಿರು’, ‘ನಮ್ಮ ನಡಿಗೆ ಶಾಂತಿ ಕಡೆಗೆ’ ಎಂಬ ಘೋಷಣೆಗಳನ್ನು ಕೂಗಿದರು. ಜಾಥಾದ ವಾಹನದಲ್ಲಿದ್ದ ‘ಹಿಂದೂ–ಮುಸ್ಲಿಂ ಶತ್ರುಗಳಲ್ಲ,ನಾವೆಲ್ಲರೂ ಒಂದೇ. ಶಾಂತಿಯಿಂದ ನೆಮ್ಮದಿ ಸಾಧ್ಯ’ ಎಂಬ ಬರಹ; ಹಿಂದೂ–ಮುಸ್ಲಿಂ ವ್ಯಕ್ತಿಗಳು ಪರಸ್ಪರ ಮುತ್ತಿಕ್ಕುತ್ತಿದ್ದ ಚಿತ್ರ ಗಮನ ಸೆಳೆಯಿತು.