ಮೀಸಲಾತಿ ತೆಗೆಯುವ ಹುನ್ನಾರ: ದೂರಸಂಪರ್ಕ, ಬ್ಯಾಂಕಿಂಗ್, ಏರ್ಪೋರ್ಟ್, ರೈಲ್ವೆ, ಸೇರಿ ಅತ್ಯುನ್ನತ ಸಂಸ್ಥೆಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ಸರ್ಕಾರ ಸಾಮ್ಯತೆಯಲ್ಲಿದ್ದರೆ ಸಂವಿಧಾನದ ಪ್ರಕಾರ ಮೀಸಲಾತಿ ನೀಡಬೇಕು. ಆದರೆ ಬಿಜೆಪಿಯವರು ಬುದ್ಧಿವಂತರಾಗಿದ್ದು, ಸಂಸ್ಥೆಗಳನ್ನೇ ಖಾಸಗಿಗೆ ನೀಡಿದರೆ ಮೀಸಲಾತಿ ಎಲ್ಲಿಂದ ಬಂತು. ಸರ್ಕಾರದಿಂದ ಮೀಸಲಾತಿ ತೆಗೆದರೆ ಆಕ್ರೋಶಕ್ಕೆ ತುತ್ತಾಗುವ ಸಾಧ್ಯತೆ ಇದ್ದು, ಈ ರೀತಿಯ ವಾಮಮಾರ್ಗಕ್ಕೆ ಮುಂದಾಗಿದ್ದಾರೆ’ ಎಂದು ಆರೋಪಿಸಿದರು.