ಕುಡಿಯುವ ನೀರು, ಕೃಷಿ ಉಪಯೋಗಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ನೀಡುತ್ತಿದೆ. ಫಲಾನುಭವಿಗಳು ಇದರ ಉಪಯೋಗ ಪಡೆಯುವಾಗ ವರ್ಷಗಳು ಕಳೆದಿವೆ. ಎರಡು ವರ್ಷಗಳು ಕಳೆದರೂ ಫಲಾನುಭವಿಗಳ ಕೈ ಸೇರದಿರುವ ಉದಾಹರಣೆ ಇದೆ. ಮೆಸ್ಕಾಂ, ಪರಿಶಿಷ್ಟ ಜಾತಿ, ಪಂಗಡ, ದೇವರಾಜ್ ಅರಸು ನಿಗಮ, ಗ್ರಾಮ ಪಂಚಾಯಿತಿ ಮುಂತಾದ ಇಲಾಖೆ, ನಿಗಮಗಳು ಜಂಟಿಯಾಗಿ ಯೋಜನೆಗಳನ್ನು ಮಾಡಬೇಕು. ಪ್ರಗತಿ ಕಾಮಗಾರಿಯಲ್ಲಿ ಇಲಾಖೆಗಳು ಸಂಬಂಧವೇ ಇಲ್ಲದಂತಿವೆ ಎಂದು ಆರಗ ಅಸಮಾಧಾನ ವ್ಯಕ್ತಪಡಿಸಿದರು.