<p><strong>ಶಿವಮೊಗ್ಗ</strong>: ಇಲ್ಲಿನ ತ್ಯಾವರೆಕೊಪ್ಪ ಹುಲಿ ಸಿಂಹ ಧಾಮದಲ್ಲಿ ಗುರುವಾರ ತಡರಾತ್ರಿ ಚಿಕಿತ್ಸೆ ನೀಡಲು ತೆರಳಿದ್ದ ಪಶುವೈದ್ಯೆ ಡಾ.ಸಮೀಕ್ಷಾ ರೆಡ್ಡಿ ಅವರ ಮೇಲೆ ನೀರಾನೆ ‘ಹಂಸಿಣಿ’ ತೀವ್ರ ದಾಳಿ ನಡೆಸಿದೆ. ಚಿಕಿತ್ಸೆಗೆ ಸ್ಪಂದಿಸದೇ ವೈದ್ಯೆ ಶುಕ್ರವಾರ ಬೆಳಿಗ್ಗೆ ನಿಧನರಾಗಿದ್ದಾರೆ.</p><p>ಸಮೀಕ್ಷಾ ರೆಡ್ಡಿ (27) ಮೂಲತಃ ಬೆಂಗಳೂರಿನ ಬನ್ನೇರುಘಟ್ಟ ನಿವಾಸಿ, ಫಾರ್ಮಾಸಿಸ್ಟ್ ಧ್ರುವಕುಮಾರ್ ಹಾಗೂ ಶೈಲಜಾ ದಂಪತಿಯ ಪುತ್ರಿ. ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನಲ್ಲಿ (ಜಿಕೆವಿಕೆ) ಪದವಿ ಮುಗಿಸಿದ್ದ ಅವರು ಒಂದೂವರೆ ತಿಂಗಳ ಹಿಂದಷ್ಟೇ ಇಲ್ಲಿನ ಹುಲಿ ಸಿಂಹ ಧಾಮಕ್ಕೆ ತರಬೇತಿಗೆ ನೇಮಕಗೊಂಡಿದ್ದರು.</p><p><strong>ಪರಿಶೀಲನೆಗೆ ತೆರಳಿದ್ದರು: </strong>ಹುಲಿ-ಸಿಂಹ ಧಾಮದಲ್ಲಿ ವಿಷ್ಣು ಹಾಗೂ ಹಂಸಿಣಿ ಎಂಬ ಗಂಡು ಮತ್ತು ಹೆಣ್ಣು ನೀರಾನೆ ಇವೆ. ಹಂಸಿಣಿ ಎಂಟು ತಿಂಗಳು ತುಂಬಿದ್ದ ಗರ್ಭಿಣಿ. ನಾಲ್ಕು ದಿನಗಳಲ್ಲಿ ಹೆರಿಗೆಗೆ ದಿನ ನಿಗದಿಯಾಗಿತ್ತು. ಈ ಹೊತ್ತಿನಲ್ಲಿ ಸಾಮಾನ್ಯವಾಗಿ ನೀರಾನೆಗಳು ಆಹಾರ ಸೇವಿಸುವುದಿಲ್ಲ. ನಿತ್ಯ ಗಮನಿಸುತ್ತಿದ್ದ ಸಮೀಕ್ಷಾ ಗುರುವಾರ ರಾತ್ರಿ 11 ಗಂಟೆ ವೇಳೆಗೆ ವಾಹನ ಚಾಲಕ ಕಾರ್ತಿಕ್ ಜೊತೆ ನೀರಾನೆಗಳು ಇದ್ದ ಬಾವಿಯೊಳಗೆ ತೆರಳಿದ್ದಾರೆ. </p><p>ನೀರಿನಲ್ಲಿ ಕದಲದೇ ಕುಳಿತಿದ್ದ ಹಂಸಿಣಿಯ ದೇಹದ ಉಷ್ಣಾಂಶ ಪರಿಶೀಲಿಸಿದ್ಸಾರೆ. ಈ ವೇಳೆ ಏಕಾಏಕಿ ವ್ಯಗ್ರಗೊಂಡ ಹಂಸಿಣಿ, ಇಬ್ಬರ ಬೆನ್ನತ್ತಿದೆ. ಬಾವಿಯ ಏಣಿ ಹತ್ತಿ ಕಾರ್ತಿಕ್ ಹೊರಗೆ ಬಂದಿದ್ದಾರೆ. ಹಿಂದೆಯೇ ಏಣಿ ಹತ್ತುತ್ತಿದ್ದ ಡಾ.ಸಮೀಕ್ಷಾ ಕಾಲು ಜಾರಿ ಕೆಳಗೆ ನಿಂತಿದ್ದ ನೀರಾನೆಯ ಬಾಯಿಗೆ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಅದು ಬಾಯಿ ಒತ್ತಿ ಹಿಡಿದಿದ್ದು, ಮೈ ಮೂಳೆಗಳು ಮುರಿದು ತೀವ್ರ ರಕ್ತ ಸ್ರಾವದಿಂದ ಪ್ರಜ್ಞಾಹೀನರಾಗಿದ್ದಾರೆ ಎಂದು ತಿಳಿದುಬಂದಿದೆ.</p><p>ಸ್ಥಳಕ್ಕೆ ಬಂದ ಮೃಗಾಲಯ ಸಿಬ್ಬಂದಿ, ಹಂಸಿಣಿಯನ್ನು ಓಡಿಸಿ, ಗಾಯಗೊಂಡಿದ್ದ ಸಮೀಕ್ಷಾ ರೆಡ್ಡಿ ಅವರನ್ನು<br>ಕೊಂಡೊಯ್ದು ಇಲ್ಲಿನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. </p><p>‘ಡಾ.ಸಮೀಕ್ಷಾ ಅವರು ಫೆ. 1ರಂದು ತರಬೇತಿ ಟ್ರೈನಿ ವೈದ್ಯೆಯಾಗಿ ಮೃಗಾಲಯ ಸೇರಿದ್ದರು. ರಾತ್ರಿ ನೀರಾನೆ ಬಳಿ ಹೋಗಲು ಏನು ಕಾರಣ. ಅಲ್ಲಿಗೆ ತೆರಳಲು ಅವರಿಗೆ ಯಾರು ಏನು ಸೂಚನೆ ನೀಡಿದ್ದರು ಎಂದು ತಿಳಿದಿರಲಿಲ್ಲ. ಆ ಬಗ್ಗೆ ಪರಿಶೀಲಿಸುತ್ತೇವೆ’ ಎಂದು ಹುಲಿ-ಸಿಂಹ ಧಾಮದ ಕಾರ್ಯನಿರ್ವಾಹಕ<br>ನಿರ್ದೇಶಕ ಅಮಾರಕ್ಷರ್ ತಿಳಿಸಿದರು.</p>.<h2><strong>ತನಿಖೆಗೆ ಅರಣ್ಯ ಸಚಿವರ ಸೂಚನೆ</strong></h2><p>ತರಬೇತಿ ನಿರತ ವೈದ್ಯೆಯು ನೀರಾನೆಗೆ ಚಿಕಿತ್ಸೆ ನೀಡಲು ತೆರಳಿದ್ದ ವೇಳೆ ಸುರಕ್ಷತಾ ನಿಯಮಗಳ ಪಾಲನೆ ಆಗಿದೆಯೇ ಎಂಬುದರ ಬಗ್ಗೆ ತನಿಖೆ ನಡೆಸಲು ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ. ತನಿಖೆ ನಡೆಸಿ 7 ದಿನಗಳೊಳಗೆ ವರದಿ ನೀಡುವಂತೆ ಶಿವಮೊಗ್ಗದ ಅರಣ್ಯ ವಿಭಾಗದ ಸಿಸಿಎಫ್ಗೆ ಸೂಚನೆ ನೀಡಿದ್ದಾರೆ.</p>.<h2><strong>‘ಟ್ರೈನಿ ವೈದ್ಯೆ ಕಳುಹಿಸಿದ್ದು ಸರಿಯೇ?’</strong></h2><p>‘ತರಬೇತಿ ನಿರತ ವೈದ್ಯೆಯನ್ನು ಮಾರ್ಗದರ್ಶಕರ ನೆರವಿಲ್ಲದೆ ನೀರಾನೆಯಂತಹ ದೈತ್ಯ ಪ್ರಾಣಿಯ ಆರೋಗ್ಯ ಪರಿಶೀಲಿಸಲು ಬಿಟ್ಟಿದ್ದು ಸರಿಯೇ’ ಎಂದು ಡಾ.ಸಮೀಕ್ಷಾ ರೆಡ್ಡಿ ಸೋದರ ಮಾವ ರಾಜಶೇಖರ್ ಪ್ರಶ್ನಿಸಿದರು. </p><p>‘ಸಮೀಕ್ಷಾ ಪೋಷಕರಿಗೆ ಒಬ್ಬಳೇ ಮಗಳು. ವನ್ಯಜೀವಿಗಳ ಬಗ್ಗೆ ವಿಪರೀತ ಕಾಳಜಿ ಹೊಂದಿದ್ದಳು’ ಎಂದು ನೊಂದುಕೊಂಡರು. </p><p>ಘಟನೆ ನಡೆದ ದಿನ ಹಿರಿಯ ವೈದ್ಯ ಡಾ.ಮುರಳಿ ಮನೋಹರ್ ಯುಗಾದಿ ಹಬ್ಬದ ಕಾರಣ ರಜೆಯಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ</strong>: ಇಲ್ಲಿನ ತ್ಯಾವರೆಕೊಪ್ಪ ಹುಲಿ ಸಿಂಹ ಧಾಮದಲ್ಲಿ ಗುರುವಾರ ತಡರಾತ್ರಿ ಚಿಕಿತ್ಸೆ ನೀಡಲು ತೆರಳಿದ್ದ ಪಶುವೈದ್ಯೆ ಡಾ.ಸಮೀಕ್ಷಾ ರೆಡ್ಡಿ ಅವರ ಮೇಲೆ ನೀರಾನೆ ‘ಹಂಸಿಣಿ’ ತೀವ್ರ ದಾಳಿ ನಡೆಸಿದೆ. ಚಿಕಿತ್ಸೆಗೆ ಸ್ಪಂದಿಸದೇ ವೈದ್ಯೆ ಶುಕ್ರವಾರ ಬೆಳಿಗ್ಗೆ ನಿಧನರಾಗಿದ್ದಾರೆ.</p><p>ಸಮೀಕ್ಷಾ ರೆಡ್ಡಿ (27) ಮೂಲತಃ ಬೆಂಗಳೂರಿನ ಬನ್ನೇರುಘಟ್ಟ ನಿವಾಸಿ, ಫಾರ್ಮಾಸಿಸ್ಟ್ ಧ್ರುವಕುಮಾರ್ ಹಾಗೂ ಶೈಲಜಾ ದಂಪತಿಯ ಪುತ್ರಿ. ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನಲ್ಲಿ (ಜಿಕೆವಿಕೆ) ಪದವಿ ಮುಗಿಸಿದ್ದ ಅವರು ಒಂದೂವರೆ ತಿಂಗಳ ಹಿಂದಷ್ಟೇ ಇಲ್ಲಿನ ಹುಲಿ ಸಿಂಹ ಧಾಮಕ್ಕೆ ತರಬೇತಿಗೆ ನೇಮಕಗೊಂಡಿದ್ದರು.</p><p><strong>ಪರಿಶೀಲನೆಗೆ ತೆರಳಿದ್ದರು: </strong>ಹುಲಿ-ಸಿಂಹ ಧಾಮದಲ್ಲಿ ವಿಷ್ಣು ಹಾಗೂ ಹಂಸಿಣಿ ಎಂಬ ಗಂಡು ಮತ್ತು ಹೆಣ್ಣು ನೀರಾನೆ ಇವೆ. ಹಂಸಿಣಿ ಎಂಟು ತಿಂಗಳು ತುಂಬಿದ್ದ ಗರ್ಭಿಣಿ. ನಾಲ್ಕು ದಿನಗಳಲ್ಲಿ ಹೆರಿಗೆಗೆ ದಿನ ನಿಗದಿಯಾಗಿತ್ತು. ಈ ಹೊತ್ತಿನಲ್ಲಿ ಸಾಮಾನ್ಯವಾಗಿ ನೀರಾನೆಗಳು ಆಹಾರ ಸೇವಿಸುವುದಿಲ್ಲ. ನಿತ್ಯ ಗಮನಿಸುತ್ತಿದ್ದ ಸಮೀಕ್ಷಾ ಗುರುವಾರ ರಾತ್ರಿ 11 ಗಂಟೆ ವೇಳೆಗೆ ವಾಹನ ಚಾಲಕ ಕಾರ್ತಿಕ್ ಜೊತೆ ನೀರಾನೆಗಳು ಇದ್ದ ಬಾವಿಯೊಳಗೆ ತೆರಳಿದ್ದಾರೆ. </p><p>ನೀರಿನಲ್ಲಿ ಕದಲದೇ ಕುಳಿತಿದ್ದ ಹಂಸಿಣಿಯ ದೇಹದ ಉಷ್ಣಾಂಶ ಪರಿಶೀಲಿಸಿದ್ಸಾರೆ. ಈ ವೇಳೆ ಏಕಾಏಕಿ ವ್ಯಗ್ರಗೊಂಡ ಹಂಸಿಣಿ, ಇಬ್ಬರ ಬೆನ್ನತ್ತಿದೆ. ಬಾವಿಯ ಏಣಿ ಹತ್ತಿ ಕಾರ್ತಿಕ್ ಹೊರಗೆ ಬಂದಿದ್ದಾರೆ. ಹಿಂದೆಯೇ ಏಣಿ ಹತ್ತುತ್ತಿದ್ದ ಡಾ.ಸಮೀಕ್ಷಾ ಕಾಲು ಜಾರಿ ಕೆಳಗೆ ನಿಂತಿದ್ದ ನೀರಾನೆಯ ಬಾಯಿಗೆ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಅದು ಬಾಯಿ ಒತ್ತಿ ಹಿಡಿದಿದ್ದು, ಮೈ ಮೂಳೆಗಳು ಮುರಿದು ತೀವ್ರ ರಕ್ತ ಸ್ರಾವದಿಂದ ಪ್ರಜ್ಞಾಹೀನರಾಗಿದ್ದಾರೆ ಎಂದು ತಿಳಿದುಬಂದಿದೆ.</p><p>ಸ್ಥಳಕ್ಕೆ ಬಂದ ಮೃಗಾಲಯ ಸಿಬ್ಬಂದಿ, ಹಂಸಿಣಿಯನ್ನು ಓಡಿಸಿ, ಗಾಯಗೊಂಡಿದ್ದ ಸಮೀಕ್ಷಾ ರೆಡ್ಡಿ ಅವರನ್ನು<br>ಕೊಂಡೊಯ್ದು ಇಲ್ಲಿನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. </p><p>‘ಡಾ.ಸಮೀಕ್ಷಾ ಅವರು ಫೆ. 1ರಂದು ತರಬೇತಿ ಟ್ರೈನಿ ವೈದ್ಯೆಯಾಗಿ ಮೃಗಾಲಯ ಸೇರಿದ್ದರು. ರಾತ್ರಿ ನೀರಾನೆ ಬಳಿ ಹೋಗಲು ಏನು ಕಾರಣ. ಅಲ್ಲಿಗೆ ತೆರಳಲು ಅವರಿಗೆ ಯಾರು ಏನು ಸೂಚನೆ ನೀಡಿದ್ದರು ಎಂದು ತಿಳಿದಿರಲಿಲ್ಲ. ಆ ಬಗ್ಗೆ ಪರಿಶೀಲಿಸುತ್ತೇವೆ’ ಎಂದು ಹುಲಿ-ಸಿಂಹ ಧಾಮದ ಕಾರ್ಯನಿರ್ವಾಹಕ<br>ನಿರ್ದೇಶಕ ಅಮಾರಕ್ಷರ್ ತಿಳಿಸಿದರು.</p>.<h2><strong>ತನಿಖೆಗೆ ಅರಣ್ಯ ಸಚಿವರ ಸೂಚನೆ</strong></h2><p>ತರಬೇತಿ ನಿರತ ವೈದ್ಯೆಯು ನೀರಾನೆಗೆ ಚಿಕಿತ್ಸೆ ನೀಡಲು ತೆರಳಿದ್ದ ವೇಳೆ ಸುರಕ್ಷತಾ ನಿಯಮಗಳ ಪಾಲನೆ ಆಗಿದೆಯೇ ಎಂಬುದರ ಬಗ್ಗೆ ತನಿಖೆ ನಡೆಸಲು ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ. ತನಿಖೆ ನಡೆಸಿ 7 ದಿನಗಳೊಳಗೆ ವರದಿ ನೀಡುವಂತೆ ಶಿವಮೊಗ್ಗದ ಅರಣ್ಯ ವಿಭಾಗದ ಸಿಸಿಎಫ್ಗೆ ಸೂಚನೆ ನೀಡಿದ್ದಾರೆ.</p>.<h2><strong>‘ಟ್ರೈನಿ ವೈದ್ಯೆ ಕಳುಹಿಸಿದ್ದು ಸರಿಯೇ?’</strong></h2><p>‘ತರಬೇತಿ ನಿರತ ವೈದ್ಯೆಯನ್ನು ಮಾರ್ಗದರ್ಶಕರ ನೆರವಿಲ್ಲದೆ ನೀರಾನೆಯಂತಹ ದೈತ್ಯ ಪ್ರಾಣಿಯ ಆರೋಗ್ಯ ಪರಿಶೀಲಿಸಲು ಬಿಟ್ಟಿದ್ದು ಸರಿಯೇ’ ಎಂದು ಡಾ.ಸಮೀಕ್ಷಾ ರೆಡ್ಡಿ ಸೋದರ ಮಾವ ರಾಜಶೇಖರ್ ಪ್ರಶ್ನಿಸಿದರು. </p><p>‘ಸಮೀಕ್ಷಾ ಪೋಷಕರಿಗೆ ಒಬ್ಬಳೇ ಮಗಳು. ವನ್ಯಜೀವಿಗಳ ಬಗ್ಗೆ ವಿಪರೀತ ಕಾಳಜಿ ಹೊಂದಿದ್ದಳು’ ಎಂದು ನೊಂದುಕೊಂಡರು. </p><p>ಘಟನೆ ನಡೆದ ದಿನ ಹಿರಿಯ ವೈದ್ಯ ಡಾ.ಮುರಳಿ ಮನೋಹರ್ ಯುಗಾದಿ ಹಬ್ಬದ ಕಾರಣ ರಜೆಯಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>