ತಾಲ್ಲೂಕಿನ ಛತ್ರದಹಳ್ಳಿ ಗ್ರಾಮದಲ್ಲಿ ಒಂಟಿಮನೆಯಲ್ಲಿ ಲಲಿತಮ್ಮ ಅವರ ಪತಿ ಮತ್ತು ಮಗನ ಜತೆಗೆ ವಾಸವಾಗಿದ್ದರು. ಅ.14ರಂದು ಮಗ ಹೊರಗೆ ಹೋಗಿದ್ದರು. ಪತಿ ಮನೆಯೊಳಗೆ ಇದ್ದರು. ಈ ಸಂದರ್ಭದಲ್ಲಿ ಆರೇಳು ಮಂದಿ ಇದ್ದ ತಂಡವೊಂದು ಬಂದಿದ್ದು, ‘ಮಾರಾಟ ಮಾಡುವ ಹಸುಗಳಿವೆಯೇ’ ಎಂದು ಕೇಳಿದ್ದರು. ‘ಇಲ್ಲ’ ಎಂದು ಪ್ರತಿಕ್ರಿಯಿಸಿ ಲಲಿತಮ್ಮ ಹೊರಗೆ ಬರುತ್ತಿದ್ದಂತೆ ಹಲ್ಲೆ ನಡೆಸಿ ಮೈ ಮೇಲಿದ್ದ ಚಿನ್ನಾಭರಣಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದರು.