‘ಸಾಲ ವಾಪಸ್ ಕೇಳಲು ಹೋದಾಗ ಸಂತೋಷ ಹಾಗೂ ಆತನ ಪತ್ನಿ ಆಶಾ ಗಲಾಟೆ ಮಾಡಿದ್ದರು. ಪತ್ನಿ ನಡತೆ ಸಂಬಂಧ ಅಪಪ್ರಚಾರ ಮಾಡಿದ್ದಾರೆ. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂತೋಷ ಹಾಗೂ ಆಶಾ ಅವರಅಪಪ್ರಚಾರ ಹಾಗೂ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಅವರೇ ಕಾರಣ ಎಂದು ಪತ್ನಿ ಬರೆದ ಡೆತ್ನೋಟ್ ಕೂಡ ನಾಲೆ ಬಳಿ ಸಿಕ್ಕಿದೆ’ ಎಂದು ವೀಣಾ ಪತಿ ಸಂತೋಷಕುಮಾರ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.