ಲಿಂಗಸುಗೂರು: ಕಾಂಗ್ರೆಸ್ನ ಹಿರಿಯ ಮುಖಂಡ ಡಿ.ಎಸ್. ಹೂಲಗೇರಿ ಮನೆ ಮೇಲೆ ದಾಳಿ ನಡೆಸಿದ ಜಾಗೃತ ದಳದ ಮುಖ್ಯಸ್ಥ ಮಲ್ಲೇಶ ಅಕ್ಕರಕಿ ನೇತೃತ್ವದ ತಂಡ ₹ 1.60 ಲಕ್ಷ ನಗದು, ಪಕ್ಷದ ಕರಪತ್ರ ಹಾಗೂ ಕಿರುಹೊತ್ತಿಗೆ ಜಪ್ತಿ ಮಾಡಿಕೊಂಡಿದೆ. ಭಾನುವಾರ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ದಾಳಿ ನಡೆಸಿದಾಗ ಮಾಲೀಕರು ಮನೆಯಲ್ಲಿ ಇರಲಿಲ್ಲ. ‘ಮಾಲೀಕರು ತಮಗೆ ದುಡಿದ ವೇತನ ಹಣ ನೀಡಲು ತಂದಿದ್ದಾರೆ. ಊರಿನಿಂದ ಬಂದು ವೇತನ ನೀಡುವುದಾಗಿ ಹೇಳಿದರು. ಹಾಗಾಗಿ ಈ ಹಣ ತಮಗೆ ಸೇರಿದ್ದು’ ಎಂದು ಮನೆಯ ಕೆಲಸಗಾರರಾದ ಕುಪ್ಪಮ್ಮ, ಮಾನಯ್ಯ, ವಿರೇಶ, ಜಾಫರ್ ಮಾಹಿತಿ ನೀಡಿದರು.