ನಾಗಾಪುರ ಪುನರ್ವಸತಿ ಕೇಂದ್ರದ ಗಿರಜನರು ನಿರಂತರವಾಗಿ ನಡೆಸುತ್ತಿದ್ದ ಹೋರಾಟಕ್ಕೆ ಕಂದಾಯ ಇಲಾಖೆ ಸ್ಪಂದಿಸಿ 250 ಕುಟುಂಬಗಳಿಗೆ ನೀಡಿದ್ದ 730 ಹೆಕ್ಟೇರ್ ಪ್ರದೇಶದ ಗಡಿ ಗುರುತಿಸುವ ಕೆಲಸ ಮುಕ್ತಾಯಗೊಂಡಿದೆ. ಕೆರೆ, ಶಾಲೆ ಆವರಣ ಹೊರತುಪಡಿಸಿ ಭೂಮಿ ಗುರುತಿಸಲಾಗಿದೆ. ಬ್ಲಾಕ್ 1ರ ಫಲಾನುಭವಿಗೆ ಈಗಾಗಲೇ ತಲಾ 5 ಎಕರೆ ಭೂಮಿ ಗುರುತಿಸಿ ಕಲ್ಲು ಹಾಕಲಾಗಿದೆ. ಈ ಬ್ಲಾಕ್ನಲ್ಲಿ ಇಬ್ಬರಿಗೆ ಭೂಮಿ ಕೊರತೆ ಕಾಣಿಸಿದ್ದು, ಈ ಫಲಾನುಭವಿಗೆ ಬ್ಲಾಕ್ 2ರಲ್ಲಿ ಭೂಮಿ ಗುರುತಿಸಿ ನೀಡಲಾಗುವುದು ಎಂದು ಉಪವಿಭಾಗಾಧಿಕಾರಿ ಕೆ. ನಿತೀಶ್ ತಿಳಿಸಿದರು.