ನಡೆಯದ ಸಂತೆ:ಜನತಾ ಕರ್ಪೂ ಹಿನ್ನೆಯಲ್ಲಿ ತಾಲ್ಲೂಕಿನ ನಗರ ಸಂತೆ ರದ್ದಾಗಿತ್ತು. ಸಂತೆ ರದ್ದತಿಗೆ ಆದೇಶ ಹೊರಡಿಸಿದ ತಾಲ್ಲೂಕು ಆಡಳಿತ ಕ್ರಮದಿಂದಾಗಿ ಸಂತೆ ನಡೆದಿಲ್ಲ. ಪಟ್ಟಣದ ಶನಿವಾರ ನಡೆಯುವ ವಾರದ ಸಂತೆಯೂ ರದ್ದಾಗಿತ್ತು. ಸಂತೆ ನಡೆಯದ ಪರಿಣಾಮ ಹಳ್ಳಿಗಳಿಂದ ಬಂದ ಜನರು ಪರದಾಡಬೇಕಾಯಿತು. ಸಂಜೆ ಸುಮಾರಿಗೆ ವಾಹನ ಮತ್ತು ಗಾಡಿಗಳಲ್ಲಿ ತರಕಾರಿ ಮಾರಾಟ ನಡೆದಿದ್ದು, ತರಕಾರಿ ಖರೀದಿಗೆ ಜನರು ಮುಗಿಬಿದ್ದರು.