ಬೆಂಗಳೂರು: ಕರ್ನಾಟಕದ ಚುನಾವಣಾ ಪ್ರಚಾರದ ಅಂಗವಾಗಿ ಬಿಜೆಪಿಯ ಜಾಹೀರಾತುಗಳಲ್ಲಿರುವ ಆಕ್ಷೇಪಾರ್ಹ ಅಂಶಗಳ ಬಗ್ಗೆ ರಾಜ್ಯ ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಈ ದೂರನ್ನು ಪರಿಶೀಲಿಸಿದ ಆಯೋಗವು ಸುದ್ದಿ ವಾಹಿನಿಗಳಿಗೆ ಬಿಜೆಪಿ ನೀಡಿರುವ ಜಾಹೀರಾತುಗಳನ್ನು ತಕ್ಷಣದಿಂದಲೇ ವಾಪಾಸು ಪಡೆದಿದೆ. ಅದೇ ವೇಳೆ ಈ ಜಾಹೀರಾತುಗಳನ್ನು 24ಗಂಟೆಗಳೊಳಗೆ ಪುನರ್ ಪರಿಶೀಲನೆಗೊಳಪಡಿಸುವಂತೆ ಪೂರ್ವದೃಢೀಕರಣ ಸಮಿತಿಗೆ ಆದೇಶಿಸಿದೆ.