ಜಿಲ್ಲೆ ಹಾಗೂ ರಾಜ್ಯದ ಎಲ್ಲಾ ಕಡೆ ಜಲ ಸಂಕಷ್ಟ ನಿವಾರಣೆಗೆ ಶ್ರಮಿಸಿರುವ ‘ಎಂಜಿನಿಯರುಗಳ ಗುರು’ವಿಗೆ ಗೌರವ ಸಲ್ಲಿಸಲು ಜಿಲ್ಲಾಡಳಿತ, ಮಹಾನಗರ ಪಾಲಿಕೆ ವೃತ್ತ ನಿರ್ಮಿಸಬೇಕಿತ್ತು. ಆದರೆ, ಇದುವರೆಗೆ ಆ ಕೆಲಸವಾಗಿಲ್ಲ. ಸರ್ಕಾರ ಮಾಡಬೇಕಾದ ಕಾರ್ಯವನ್ನು ಎಂಜಿನಿಯರೊಬ್ಬರು ಸ್ವಂತ ಖರ್ಚಿನಲ್ಲಿ ಮಾಡಿರುವುದು ಹೆಮ್ಮೆಯ ವಿಷಯ. ಇದು ಅವರು ವಿಶ್ವೇಶ್ವರಯ್ಯನವರ ಮೇಲೆ ಇಟ್ಟಿರುವ ಗೌರವವನ್ನು ತೋರಿಸುತ್ತದೆ ಎಂದು ಎಂಜಿನಿಯರುಗಳು ಹೇಳುತ್ತಾರೆ.