‘ನಾವು ಯಾವ ಪಕ್ಷಕ್ಕೂ ಅಂಟಿಕೊಂಡವರಲ್ಲ. ಪಕ್ಷ, ಜಾತಿ ನೋಡದೆ ಯೋಗ್ಯರನ್ನು ಆಯ್ಕೆ ಮಾಡಿ ಎಂದು ಹೇಳುತ್ತಾ ಬಂದಿದ್ದೇವೆ. ಆದರೆ, ನಿಮ್ಮ ಪ್ರತಿಕ್ರಿಯೆ ತುಂಬಾ ನೋವುಂಟು ಮಾಡಿದೆ. ನಾವು ಏನೇ ಹೇಳುವುದಿದ್ದರೂ ನೇರವಾಗಿ, ಸ್ಪಷ್ಟವಾಗಿ ಹೇಳುತ್ತೇವೆ. ಸಂಕುಚಿತ ಮನೋಭಾವ ನಮಗಿಲ್ಲ. ಇದು ನಮ್ಮನ್ನು ಬಲ್ಲವರಿಗೆಲ್ಲ ಗೊತ್ತು. ಬೇಕಾದರೆ ನಿಮ್ಮ ತಂದೆಯವರನ್ನೇ (ಎಚ್.ಡಿ.ದೇವೇಗೌಡ) ಕೇಳಿ ನೋಡಿರಿ’ ಎಂದು ಸ್ವಾಮೀಜಿ ಪತ್ರದಲ್ಲಿ ನಮೂದಿಸಿದ್ದಾರೆ.