2017–18ನೇ ಸಾಲಿನಲ್ಲಿ 9ನೇ ಸ್ಥಾನ ಪಡೆದಿದ್ದ ಜಿಲ್ಲೆ, 2018–19ನೇ ಸಾಲಿನಲ್ಲಿ 25ನೇ ಸ್ಥಾನಕ್ಕೆ ಕುಸಿತ ಕಂಡಿತ್ತು. 2019–20ನೇ ಸಾಲಿನಲ್ಲಿ ಮೊದಲ 10 ಸ್ಥಾನಗಳಲ್ಲಿ ಬರುವ ಗುರಿ ಯೊಂದಿಗೆ ಶಾಲೆ ದತ್ತು, ಮನೆ ಮನೆಗೆ ಭೇಟಿ, ಪಾಲಕರೊಂದಿಗೆ ಸಂವಾದ, ಮಕ್ಕಳಿಗೆ ಮತ್ತು ಶಿಕ್ಷಕರಿಗೆ ವಿಶೇಷ ತರಬೇತಿ, ಗುಂಪು ರಚನೆ, ಹೆಚ್ಚುವರಿ ತರಗತಿ ನಡೆಸುವುದು ಸೇರಿದಂತೆ ಇತರ ಹಲವು ವಿಶಿಷ್ಟ ಯೋಜನೆಗಳ ಮೂಲಕ ಪ್ರಯೋಗಕ್ಕೆ ಮುಂದಾಗಿದೆ.