ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕು ಗುತ್ತಿ ಎಡೆಹಳ್ಳಿ ಬಳಿ ಹಳ್ಳದಲ್ಲಿ ಶುಕ್ರವಾರ ಈಜಲು ಹೋದ ಎಂಟನೇ ತರಗತಿ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಸಿ.ಕೆ. ರೋಡ್ ಪ್ರೌಢಶಾಲೆಯ ಸಂಜಯ್ ಮೃತ ವಿದ್ಯಾರ್ಥಿ.
ಮನೆಯ ಹತ್ತಿರವಿರುವ ಕುಂಟೆಹಳ್ಳಕ್ಕೆ ಈಜಲು ಹೋಗಿದ್ದನು. ದಡ ಸೇರಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.