‘ಲಾಕ್ ಡೌನ್ ಆಗಿರುವುದರಿಂದ ಕೆಲಸ ಸಿಗುತ್ತಿಲ್ಲ. ಅಗತ್ಯ ವಸ್ತುಗಳು ಕೂಡ ಸಿಗುತ್ತಿಲ್ಲ. ನೀವು ನಿಮ್ಮೂರಿಗೆ ತೆರಳಿರಿ ಎಂದು ಮನೆಗಳನ್ನು ಮಾಲೀಕರು ಖಾಲಿ ಮಾಡಿಸಿದರು. ಮುಖ್ಯ ರಸ್ತೆಯಲ್ಲಿ ಓಡಾಡಲು ಆಗುತ್ತಿಲ್ಲ. ಯಾವ ಗ್ರಾಮದವರೂ ಅವರು ಊರೊಳಗೆ ಹೋಗುವುದಕ್ಕೆ ಬಿಡುತ್ತಿಲ್ಲ. ಹೀಗಾಗಿ, ಹೊಲ–ಗದ್ದೆಗಳಲ್ಲಿ ಬಿಸಿಲನ್ನೂ ಲೆಕ್ಕಿಸದೇ ನಡೆದುಕೊಂಡು ಹೋಗುತ್ತಿದ್ದೇವೆ. ನಾವು ಮಹಾರಾಷ್ಟ್ರದಿಂದ ಬಂದವರೆಂದು ಕೆಲವರು ಅಲ್ಲಲ್ಲಿ ನಮ್ಮತ್ತ ಕಲ್ಲೆಸೆದು ಓಡಿಸಿದ ಅನುಭವವೂ ಆಗಿದೆ’ ಎಂದು ಅವರು ಕಣ್ಣೀರು ಹಾಕಿದರು.