ಪ್ರವಾಸಿಗರು ನೀಡುತ್ತಿರುವ ಮಂಡಕ್ಕಿ, ಅಕ್ಕಿ, ಅವಲಕ್ಕಿ, ದವಸ, ಧಾನ್ಯ ಮುಂತಾದ ಆಹಾರವನ್ನೇ ನೆಚ್ಚಿಕೊಂಡಿದ್ದ ಮೀನುಗಳು ಆಹಾರವಿಲ್ಲದೇ ನಲುಗಿ ಹೋಗಿವೆ. ಆದರೆ, ಮೀನುಗಳ ಮೂಕರೋಧನೆಗೆ ಸ್ಪಂದಿಸಿದ ಸಮಾಜ ಸೇವಕ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಸೊಪ್ಪುಗುಡ್ಡೆ ರಾಘವೇಂದ್ರ, ರೋಟರಿ ಸಂಸ್ಥೆಯ ಕೆ.ಪಿ.ಎಸ್.ಸ್ವಾಮಿ, ಡಾ.ನಂದಕಿಶೋರ್, ತಾಲ್ಲೂಕು ಪಂಚಾಯಿತಿಯ ವ್ಯವಸ್ಥಾಪಕ ರಾಘವೇಂದ್ರ, ಲಯನ್ಸ್ ಅಧ್ಯಕ್ಷ ಶಶಿಧರ್ ಮತ್ತು ಸಮಾನ ಮನಸ್ಕ ಗೆಳೆಯರ ಬಳಗ ಮೀನುಗಳಿಗೆ ಆಹಾರ ಉಣಬಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.