ಕಾರ್ಯಕ್ರಮದ ವಕ್ತಾರ ಡಾ.ಅಮೃತಾನಂದ ಸ್ವಾಮೀಜಿ ಮಾತನಾಡಿ, ‘ನಮ್ಮ ದೇಶದ ಯುವಶಕ್ತಿಯು ಮುಂಚೂಣಿ ಸ್ಥಾನದಲ್ಲಿದೆ. ಆದರೆ, ಇಂದಿಗೂ ನಮ್ಮ ರಾಷ್ಟದಲ್ಲಿ ದೇಶದ್ರೋಹಿ ಮಾನಸಿಕತೆಯ ವಿಚಾರಧಾರೆಯ ಕೆಲವು ಮನಸ್ಸುಗಳು ತಲೆ ಎತ್ತುತ್ತಿವೆ. ತಮ್ಮ ಸ್ವಾರ್ಥಕ್ಕಾಗಿ ಸಮಾಜವನ್ನು ಒಡೆಯುವ ಹುನ್ನಾರ ನಡೆಸುತ್ತಿವೆ’ ಎಂದು ವಿಷಾದ ವ್ಯಕ್ತಪಡಿಸಿದರು.