12ರಂದು ಬೆಳಿಗ್ಗೆ 9.30ಕ್ಕೆ ಪೋತಿ ಸ್ಥಾಪನೆ, ಕೀರ್ತನೆ ಕಾರ್ಯಕ್ರಮ ನಡೆಯಲಿದೆ. ಅಂದು ಸಂಜೆ 5ರಿಂದ 7ರವರೆಗೆ ರಾಮಜಪ ಪ್ರವಚನ ನಡೆಯಲಿದೆ. ನಂತರ ಸಂಗೀತ ಭಜನೆ ಕಾರ್ಯಕ್ರಮ ನಡೆಯಲಿದೆ. 13ರಂದು ಬೆಳಿಗ್ಗೆ 6ಕ್ಕೆ ಕಾಕಡಾರತಿ, ನಂತರ ಶ್ರೀರಾಮ ಜನ್ಮದ ನಿಮಿತ್ತ ಭಜನೆ ಮತ್ತು ಮಹಾಮಂಗಳಾರತಿ, ಸಂಜೆ 5ಕ್ಕೆ ನಾಮಜಪ ಹಾಗೂ ಪ್ರವಚನ ನಡೆಯಲಿದೆ. ಅಂದು ಸಂಜೆ ಪುಂಡಲಿಕರಾವ್ ಗಡ್ಡಾಳೆ ಹಾಗೂ ಕೆ.ವಿ.ರಾಮಚಂದ್ರರಾವ್ ಅವರಿಂದ ಪ್ರವಚನ ನಡೆಯಲಿದೆ. 14ರಂದು ಬೆಳಿಗ್ಗೆ 5.30ರಿಂದ ಕಾಕಡಾರತಿ ನಡೆಯಲಿದ್ದು, 8.30ರಿಂದ 11.30ರವರೆಗೆ ರಾಜಬೀದಿ ಉತ್ಸವ ಮತ್ತು ಕಲಾಕೀರ್ತನೆ, ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಮಾಹಿತಿ ನೀಡಿದರು.