ಗಿರೀಶ್ ಅವರನ್ನು ಶಿವಮೊಗ್ಗದಿಂದ ದಾವಣಗೆರೆ ತಾಲ್ಲೂಕಿಗೆ, ಎನ್.ಜೆ.ನಾಗರಾಜ್ ಅವರನ್ನು ಚನ್ನಗಿರಿಯಿಂದ ಶಿವಮೊಗ್ಗ ತಾಲ್ಲೂಕಿಗೆ ವರ್ಗಾವಣೆ ಮಾಡಲಾಗಿದೆ. ಬಿ.ಎಸ್.ಕಡಕಭಾವಿ ಅವರನ್ನು ಮೈಸೂರಿನಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಸಹಾಯಕರ ಹುದ್ದೆಗೆ, ಆ ಹುದ್ದೆಯಲ್ಲಿದ್ದ ನಫೀಜಾ ಬೇಗಂ ಅವರನ್ನು ಅದೇ ಕಚೇರಿಯ ನಗರಾಭಿವೃದ್ಧಿ ಕೋಶಕ್ಕೆ ವರ್ಗಾವಣೆ ಮಾಡಲಾಗಿದೆ.