ಬಿಎಸ್ಪಿ ಪಕ್ಷ ವೇಗ ಪಡೆದುಕೊಳ್ಳುತ್ತಿದೆ. ಕಳೆದ ಸೆ. 28ರಿಂದ 60 ದಿನಗಳ ಕಾಲ ‘ಜೈ ಭೀಮ್ ಜನ ಜಾಗೃತಿ’ ಜಾಥಾ ಮಾಡಲಾಗಿದೆ. ಇದರಿಂದ ಪಕ್ಷಕ್ಕೆ ಹೊಸ ಶಕ್ತಿ ಸಿಕ್ಕಿದೆ. ಪಕ್ಷ ಸೇರಲು ಬಹಳ ಜನ ಉತ್ಸುಕರಾಗಿದ್ದಾರೆ. ಜಿಲ್ಲೆಯಲ್ಲಿ ಮಧು ಚಾರಿಟೇಬಲ್ ಟ್ರಸ್ಟ್ನ ಎನ್.ಮಧು, ವಕೀಲ ಧನಂಜಯ, ಮುಖಂಡರಾದ ಡಾ.ನಟರಾಜು, ಅಶ್ವತ್ಥ ನಾರಾಯಣ ಅವರು ಬಿಎಸ್ಪಿ ಸೇರ್ಪಡೆಯಾಗುತ್ತಿದ್ದಾರೆ ಎಂದರು.