ಹಾಸನ ಜಿಲ್ಲೆಯ ಕಟ್ಟಾಯ ಗ್ರಾಮದ ಶನೇಶ್ವರ ಅವರು ನಿತ್ಯ ಕ್ಯಾಂಟರ್ನಲ್ಲಿ ಹಾಸನದಿಂದ ಬೆಂಗಳೂರಿಗೆ ಹನುಮಾನ್ ಪಾರ್ಸೆಲ್ ಕಚೇರಿಯಿಂದ ಸರಕು ಸಾಗಣೆ ಮಾಡುತ್ತಿದ್ದರು. ಹಾಸನದ ಶಿವಾಜಿ ಅವರಿಗೆ ಸೇರಬೇಕಾದ ₹ 3 ಲಕ್ಷ ಪಡೆದುಕೊಂಡು ಹಾಸನಕ್ಕೆ ಹಿಂತಿರುಗುವಾಗ ಗವಿಮಠ ಸೇತುವೆ ಬಳಿ ಬೆಂಗಳೂರಿನಿಂದ ಓಮ್ನಿ ಕಾರಿನಲ್ಲಿ ಬಂದ ಐದು ಮಂದಿ ದುಷ್ಕರ್ಮಿಗಳು ಕ್ಯಾಂಟರ್ ಅಡ್ಡಗಟ್ಟಿ ಚಾಲಕನಿಗೆ ಚಾಕುವಿನಿಂದ ಚುಚ್ಚಿ, ಥಳಿಸಿ ಹಣ ಕಿತ್ತು ಪರಾರಿಯಾಗಿದ್ದಾರೆ.