ಭಾರತೀಯ ಕಿಸಾನ್ ಸಂಘ, ತೆಂಗು ಬೆಳೆಗಾರರ ಒಕ್ಕೂಟ, ಭೂ ಹಕ್ಕುದಾರರ ವೇದಿಕೆ, ನಿಸರ್ಗವಾಣಿ ನೀರು ಬಳಕೆದಾರರ ಸಹಕಾರ ಸಂಘ, ರಾಜಋಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ನೀರು ಬಳಕೆದಾರರ ಸಹಕಾರ ಸಂಘದ ನೇತೃತ್ವದಲ್ಲಿ ಈ ಪಾದಯಾತ್ರೆ ಹಮ್ಮಿಕೊಂಡಿದೆ. ಡಿ. 27ರಂದು ಸಂಜೆ 6ಕ್ಕೆ ಹಿರಿಯೂರಿನಿಂದ ಹೊರಟು ಭದ್ರಾ ಜಲಾಶಯದ ಸಮೀಪ ಇರುವ ರಂಗನಾಥಸ್ವಾಮಿ ದೇವಸ್ಥಾನದ ಬಳಿ ತಂಗುವುದು. 28ರಂದು ಬೆಳಿಗ್ಗೆ 5ಕ್ಕೆ ಪಾದಯಾತ್ರೆ ಮೂಲಕ ದೊಡ್ಡ ಕುಂದೂರು–ಭದ್ರಾ ನಾಲೆ ಮೇಲ್ಭಾಗದಲ್ಲಿ ಶಾಂತಿಪುರ ಮೊದಲನೇ ಪಂಪ್ಹೌಸ್ಗೆ ಸಾಗಿ ತಂಗಲಾಗುವುದು. 29ರಂದು ದುಗ್ಗಲಾಪುರ ಗ್ರಾಮದ ಜಂಬದಳ್ಳ, ಹುಣಿಸೆಘಟ್ಟ, ಬೆಟ್ಟದ ತಾವರಕೆರೆ ಮೂಲಕ ಎರಡನೇ ಪಂಪ್ ಹೌಸ್, ಸುರಂಗ ಮಾರ್ಗ, ನರಸೀಪುರ, ರಂಗಾಪುರ, ಅಜ್ಜಂಪುರ ರೈಲ್ವೆ ನಿಲ್ದಾಣ, ಹೆಬ್ಬೂರು, ಚಿತ್ರದುರ್ಗ ಶಾಖಾ ಕಾಲುವೆ ಮತ್ತು ತುಮಕೂರು ನಾಲಾ ಕಾಮಗಾರಿ ವಿಭಾಗವಾಗುವ ಸ್ಥಳ ಪರಿಶೀಲನೆ ನಂತರ ಹಿರಿಯೂರಿಗೆ ಬರಲಾಗುವುದು ಎಂದು ಅವರು ವಿವರಿಸಿದರು.