ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೆಡಿಎಸ್‌ ತೊರೆದು ಬಿಜೆಪಿ ಸೇರಲು ಶಿಕ್ಷಣ ಸಚಿವರಿಗೆ ₹60 ಕೋಟಿ ಆಮಿಷ’

Last Updated 12 ಜುಲೈ 2019, 19:17 IST
ಅಕ್ಷರ ಗಾತ್ರ

ತುಮಕೂರು: ‘ಜೆಡಿಎಸ್‌ ತೊರೆದು ಬಿಜೆಪಿ ಸೇರಲುಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಆರ್‌.ಶ್ರೀನಿವಾಸ್‌ ಅವರಿಗೆ ₹ 60 ಕೋಟಿ ಆಮಿಷ ಒಡ್ಡಲಾಗಿತ್ತು’ ಎಂದು ಶ್ರೀನಿವಾಸ್‌ ಅವರ ಪುತ್ರ ದುಷ್ಯಂತ್‌ ಹೇಳಿದರು.

ತಮ್ಮನ್ನು ಸಂಪರ್ಕಿಸಿದ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಒಂದು ವರ್ಷದಿಂದಲೂ ಬಿಜೆಪಿ ಸೇರುವಂತೆ ನಮ್ಮ ತಂದೆಗೆ ಆಹ್ವಾನ ಬರುತ್ತಲೇ ಇದೆ. ನಾಲ್ಕೈದು ದಿನಗಳ ಹಿಂದೆ ಈ ಭಾರಿ ಮೊತ್ತದ ಆಮಿಷ ಬಂದಿತ್ತು’ ಎಂದು ತಿಳಿಸಿದರು.

‘ಬಿಜೆಪಿಯ ಉನ್ನತ ನಾಯಕರೇ ಈ ಆಹ್ವಾನವನ್ನು ನಮಗೆ ನೇರವಾಗಿ ನೀಡಿದ್ದಾರೆ. ನಮ್ಮ ಸಂಬಂಧಿಕರ ಮೂಲಕವೂ ಒತ್ತಡ ತಂದಿದ್ದರು’ ಎಂದು ಹೇಳಿದ ದುಷ್ಯಂತ್‌, ಆಹ್ವಾನ ನೀಡಿದ ನಾಯಕರ ಹೆಸರನ್ನು ಈ ಹಂತದಲ್ಲಿ ಬಹಿರಂಗ
ಪಡಿಸಲಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT