ತುಮಕೂರು: ‘ಜೆಡಿಎಸ್ ತೊರೆದು ಬಿಜೆಪಿ ಸೇರಲುಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಆರ್.ಶ್ರೀನಿವಾಸ್ ಅವರಿಗೆ ₹ 60 ಕೋಟಿ ಆಮಿಷ ಒಡ್ಡಲಾಗಿತ್ತು’ ಎಂದು ಶ್ರೀನಿವಾಸ್ ಅವರ ಪುತ್ರ ದುಷ್ಯಂತ್ ಹೇಳಿದರು.
ತಮ್ಮನ್ನು ಸಂಪರ್ಕಿಸಿದ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಒಂದು ವರ್ಷದಿಂದಲೂ ಬಿಜೆಪಿ ಸೇರುವಂತೆ ನಮ್ಮ ತಂದೆಗೆ ಆಹ್ವಾನ ಬರುತ್ತಲೇ ಇದೆ. ನಾಲ್ಕೈದು ದಿನಗಳ ಹಿಂದೆ ಈ ಭಾರಿ ಮೊತ್ತದ ಆಮಿಷ ಬಂದಿತ್ತು’ ಎಂದು ತಿಳಿಸಿದರು.
‘ಬಿಜೆಪಿಯ ಉನ್ನತ ನಾಯಕರೇ ಈ ಆಹ್ವಾನವನ್ನು ನಮಗೆ ನೇರವಾಗಿ ನೀಡಿದ್ದಾರೆ. ನಮ್ಮ ಸಂಬಂಧಿಕರ ಮೂಲಕವೂ ಒತ್ತಡ ತಂದಿದ್ದರು’ ಎಂದು ಹೇಳಿದ ದುಷ್ಯಂತ್, ಆಹ್ವಾನ ನೀಡಿದ ನಾಯಕರ ಹೆಸರನ್ನು ಈ ಹಂತದಲ್ಲಿ ಬಹಿರಂಗ ಪಡಿಸಲಾರೆ ಎಂದರು.